Don't Miss!
- Sports
ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲಬೇಕು: ವಾಸಿಂ ಜಾಫರ್ ಹೇಳಿಕೆ
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಚೆಲುವಿನ ಚಿತ್ತಾರ'ದ ಐಸೂ ನೆನೆದು ನಟಿ ಅಮೂಲ್ಯ ಪತ್ರ!
ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ ಕ್ವೀನ್ ಅಂತಲೇ ಕರೆಸಿಕೊಳ್ಳುವ ನಟಿ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅಮೂಲ್ಯ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಸುದ್ದಿ ಆಗಿದ್ದರು.
ನಟಿ ಅಮೂಲ್ಯ ಅಂದಾಕ್ಷಣ ಮಾದೇಸ, ಮಾದೇಸ ಎನ್ನುವ ಮುದ್ದು ಧ್ವನಿ ನೆನಪಾಗುತ್ತದೆ. ಹೌದು, ನಟಿ ಅಮೂಲ್ಯಗೆ ಬ್ರೇಕ್ ಕೊಟ್ಟ ಮೊದಲ ಸಿನಿಮಾ 'ಚೆಲುವಿನ ಚಿತ್ತಾರ'. ಈ ಚಿತ್ರದಲ್ಲಿ ಮುಗ್ಧ ಪ್ರೇಮಿಯ ಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು.
ಮಕ್ಕಳ
ಜೊತೆ
ಅಣ್ಣಮ್ಮ
ದೇವಸ್ಥಾನದಲ್ಲಿ
ಹರಕೆ
ತೀರಿಸಿದ
ನಟಿ
ಅಮೂಲ್ಯ!
ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ನಟಿ ಅಮೂಲ್ಯ ನೆನಪಿಸಿಕೊಂಡಿದ್ದಾರೆ. ಕಾರಣ ಈ ಸಿನಿಮಾ ತೆರೆಕಂಡು 15 ವರ್ಷ ಆಗಿದೆ.

ಅಮೂಲ್ಯಗೆ ಬ್ರೇಕ್ ಕೊಟ್ಟಿದ್ದು ಚೆಲುವಿನ ಚಿತ್ತಾರ!
ನಟಿ ಅಮೂಲ್ಯಗೆ ನಾಯಕಿಯ ಪಟ್ಟ ಕೊಟ್ಟಿದ್ದು ಚೆಲುವಿನ ಚಿತ್ತಾರ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅಮೂಲ್ಯ ಲಕ್ ಬದಲಾಗಿತು. ನಂತರ ಸಿನಿಮಾರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡು, ಸಾಲು, ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಅಮೂಲ್ಯ. ಈ ಚಿತ್ರದ ಮೂಲಕ ಅಮೂಲ್ಯ ನಾಯಕಿಯಾಗಿ 15 ವರ್ಷ ಆಗಿದೆ. ಹಾಗಾಗಿ ಸರಣಿ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ನಟಿ
ಅಮೂಲ್ಯ
ಅವಳಿ
ಮಕ್ಕಳ
ಫೋಟೊ
ಇಲ್ಲಿವೆ
ನೋಡಿ

ಆ ದಿನಗಳನ್ನು ನೆನೆದ ಅಮೂಲ್ಯ!
'ಚೆಲುವಿನ ಚಿತ್ತಾರ' ತಂಡವನ್ನು ನೆನೆದು ಅಮೂಲ್ಯ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. " ಚೆಲುವಿನ ಚಿತ್ತಾರ ನನ್ನ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ. ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ನನ್ನನ್ನು ಹೀರೊಯಿನ್ ಆಗಿ ಪರಿಚಯಿಸಿ, ಐಸೂ ಎನ್ನುವ ಹೆಸರಿನೊಂದಿಗೆ ಕನ್ನಡ ಜನತೆಯ ಮನಸ್ಸಲ್ಲಿ ಕೂರಿಸಿದೆ." ಎಂದು ಬರೆದುಕೊಂಡಿದ್ದಾರೆ.

ಎಸ್. ನಾರಾಯಣ್ಗೆ ಅಮೂಲ್ಯ ಧನ್ಯವಾದ!
" ಶ್ರೀ ಎಸ್ ನಾರಾಯಣ್ ಸರ್ ಅವರಿಗೂ ಹಾಗು ನನ್ನ ಎಲ್ಲಾ ಹೆಜ್ಜೆಗಳಲ್ಲೂ ಸಲಹೆ ನೀಡುತ್ತಾ ಬೆಂಬಲವಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಅದಲ್ಲದೇ ಚೆಲುವಿನ ಚಿತ್ತಾರ ಅತ್ಯಂತ ಯಶಸ್ಸು ಕಾಣಲು ಕಾರಣೀಕರ್ತರಾದ ಸಿನಿಮಾ ತಂತ್ರಜ್ಞರು, ಕ್ಯಾಮೆರಾಮ್ಯಾನ್, ಮೇಕಪ್ ಮ್ಯಾನ್ ಹಾಗೂ ಮಾಧ್ಯಮ ವರ್ಗದವರಿಗೆ ಹಾಗೂ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ." ಎಂದು ಬರೆದಿದ್ದಾರೆ.
ಅವಳಿ
ಮಕ್ಕಳ
ತಾಯಿ
ಅಮೂಲ್ಯ
ಹೇಗಿದ್ದಾರೆ?
ನಟಿಯ
ಹೊಸ
ಗ್ಲಾಮರ್
ಲುಕ್
ನೋಡಿದ್ರಾ?

ನಟಿಯಾಗಿ ಯಶಸ್ಸು ಕಂಡ ಅಮೂಲ್ಯ!
'ಚಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿಯಾದ ನಟಿ ಅಮೂಲ್ಯ, ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿದ್ದಾರೆ. ಇನ್ನು ಬಾಲ ನಟಿಯಾಗಿಯೂ ಅಮೂಲ್ಯ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಆದ ಬಳಿಕವೂ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಅಮೂಲ್ಯ ಕಮ್ಬ್ಯಾಕ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಮೂಲ್ಯಾ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ನೋಡಬೇಕಿದೆ.