Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಷ್ ರಾಜೀನಾಮೆಗೆ ಯಾರ್ಯಾರು ಏನನ್ನುತ್ತಾರೆ?
ಬೆಂಗಳೂರು : ಅಂಬರೀಷ್ ರಾಜೀನಾಮೆಯನ್ನು ಕನ್ನಡ ಚಿತ್ರರಂಗ ಸ್ವಾಗತಿಸಿದೆ. ಕಾವೇರಿ ಹೋರಾಟಕ್ಕೆ ಅಂಬರೀಷ್ ರಾಜೀನಾಮೆ ಮೂಲಕ ಇನ್ನಷ್ಟು ಕಾವು ತಂದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಯಾರ್ಯಾರು ಏನಂದರು?
ವಿಷ್ಣುವರ್ಧನ್ - ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ. ಇದು ಅಂಬರೀಷ್ ಅವರ ಕಮೀಟ್ಮೆಂಟ್ ಬಿಂಬಿಸುತ್ತದೆ. ಅಂಬರೀಷ್ ರಾಜೀನಾಮೆಯಿಂದ ನನಗೆ ಅಚ್ಚರಿಯೇನೂ ಆಗಿಲ್ಲ. ನಾನದನ್ನು ನಿರೀಕ್ಷಿಸಿದ್ದೆ... ನಂಬಿದವರ ಹಿತಕ್ಕಾಗಿ, ನಾಡಿನ ರೈತರ ಹಿತಕ್ಕಾಗಿ ಅಧಿಕಾರ ತ್ಯಜಿಸಿ ಅಂಬರೀಷ್ ಮಾದರಿಯಾಗಿದ್ದಾರೆ.
ಶಶಿಕುಮಾರ್ - ರಾಜೀನಾಮೆ ಮೂಲಕ ಅಂಬರೀಷ್ ಈಗ ನಿಜವಾದ ‘ಮಂಡ್ಯದ ಗಂಡು’. ಅಂಬರೀಷ್ ನಿಲುವಿನಿಂದ ಕಾವೇರಿ ಹೋರಾಟಕ್ಕೆ ಸಿಂಹಬಲ ಬಂದಂತಾಗಿದೆ.
ಜಗ್ಗೇಶ್ - ರಾಜೀನಾಮೆ ವಿಚಾರ ಕೇಳಿ ನಿಜಕ್ಕೂ ಸಂತೋಷವಾಯಿತು. ಅಧಿಕಾರವನ್ನು ಎಂದೂ ಕೇರ್ ಮಾಡದ ಅಂಬಿ ಅಣ್ಣನ ನಿಲುವು ಶ್ಲಾಘನೀಯ. ಇನ್ನಾದರೂ ಅಂಬರೀಷ್ ಬಗೆಗಿನ ಅರ್ಥಹೀನ ಟೀಕೆಗಳು ನಿಲ್ಲಲಿ.
ಸಾ.ರಾ.ಗೋವಿಂದ್ - ಕಾವೇರಿ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಅಂಬಿ ನೇತೃತ್ವದಲ್ಲಿ ಮುಂದುವರೆದು, ಯಶಸ್ಸು ಪಡೆಯಲಿದೆ. ಜನರ ಆಶಯಕ್ಕೆ ರಾಜೀನಾಮೆ ಮೂಲಕ ಅಂಬರೀಷ್ ಸ್ಪಂದಿಸಿದ್ದಾರೆ.