ಅಂಬರೀಷ್‌ ರಾಜೀನಾಮೆಗೆ ಯಾರ್ಯಾರು ಏನನ್ನುತ್ತಾರೆ?

By Staff

ಬೆಂಗಳೂರು : ಅಂಬರೀಷ್‌ ರಾಜೀನಾಮೆಯನ್ನು ಕನ್ನಡ ಚಿತ್ರರಂಗ ಸ್ವಾಗತಿಸಿದೆ. ಕಾವೇರಿ ಹೋರಾಟಕ್ಕೆ ಅಂಬರೀಷ್‌ ರಾಜೀನಾಮೆ ಮೂಲಕ ಇನ್ನಷ್ಟು ಕಾವು ತಂದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಯಾರ್ಯಾರು ಏನಂದರು?

ವಿಷ್ಣುವರ್ಧನ್‌ - ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ. ಇದು ಅಂಬರೀಷ್‌ ಅವರ ಕಮೀಟ್‌ಮೆಂಟ್‌ ಬಿಂಬಿಸುತ್ತದೆ. ಅಂಬರೀಷ್‌ ರಾಜೀನಾಮೆಯಿಂದ ನನಗೆ ಅಚ್ಚರಿಯೇನೂ ಆಗಿಲ್ಲ. ನಾನದನ್ನು ನಿರೀಕ್ಷಿಸಿದ್ದೆ... ನಂಬಿದವರ ಹಿತಕ್ಕಾಗಿ, ನಾಡಿನ ರೈತರ ಹಿತಕ್ಕಾಗಿ ಅಧಿಕಾರ ತ್ಯಜಿಸಿ ಅಂಬರೀಷ್‌ ಮಾದರಿಯಾಗಿದ್ದಾರೆ.

ಶಶಿಕುಮಾರ್‌ - ರಾಜೀನಾಮೆ ಮೂಲಕ ಅಂಬರೀಷ್‌ ಈಗ ನಿಜವಾದ ‘ಮಂಡ್ಯದ ಗಂಡು’. ಅಂಬರೀಷ್‌ ನಿಲುವಿನಿಂದ ಕಾವೇರಿ ಹೋರಾಟಕ್ಕೆ ಸಿಂಹಬಲ ಬಂದಂತಾಗಿದೆ.

ಜಗ್ಗೇಶ್‌ - ರಾಜೀನಾಮೆ ವಿಚಾರ ಕೇಳಿ ನಿಜಕ್ಕೂ ಸಂತೋಷವಾಯಿತು. ಅಧಿಕಾರವನ್ನು ಎಂದೂ ಕೇರ್‌ ಮಾಡದ ಅಂಬಿ ಅಣ್ಣನ ನಿಲುವು ಶ್ಲಾಘನೀಯ. ಇನ್ನಾದರೂ ಅಂಬರೀಷ್‌ ಬಗೆಗಿನ ಅರ್ಥಹೀನ ಟೀಕೆಗಳು ನಿಲ್ಲಲಿ.

ಸಾ.ರಾ.ಗೋವಿಂದ್‌ - ಕಾವೇರಿ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಅಂಬಿ ನೇತೃತ್ವದಲ್ಲಿ ಮುಂದುವರೆದು, ಯಶಸ್ಸು ಪಡೆಯಲಿದೆ. ಜನರ ಆಶಯಕ್ಕೆ ರಾಜೀನಾಮೆ ಮೂಲಕ ಅಂಬರೀಷ್‌ ಸ್ಪಂದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X