twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಷ್‌ ರಾಜೀನಾಮೆಗೆ ಯಾರ್ಯಾರು ಏನನ್ನುತ್ತಾರೆ?

    By Staff
    |

    ಬೆಂಗಳೂರು : ಅಂಬರೀಷ್‌ ರಾಜೀನಾಮೆಯನ್ನು ಕನ್ನಡ ಚಿತ್ರರಂಗ ಸ್ವಾಗತಿಸಿದೆ. ಕಾವೇರಿ ಹೋರಾಟಕ್ಕೆ ಅಂಬರೀಷ್‌ ರಾಜೀನಾಮೆ ಮೂಲಕ ಇನ್ನಷ್ಟು ಕಾವು ತಂದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಯಾರ್ಯಾರು ಏನಂದರು?

    ವಿಷ್ಣುವರ್ಧನ್‌ - ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ. ಇದು ಅಂಬರೀಷ್‌ ಅವರ ಕಮೀಟ್‌ಮೆಂಟ್‌ ಬಿಂಬಿಸುತ್ತದೆ. ಅಂಬರೀಷ್‌ ರಾಜೀನಾಮೆಯಿಂದ ನನಗೆ ಅಚ್ಚರಿಯೇನೂ ಆಗಿಲ್ಲ. ನಾನದನ್ನು ನಿರೀಕ್ಷಿಸಿದ್ದೆ... ನಂಬಿದವರ ಹಿತಕ್ಕಾಗಿ, ನಾಡಿನ ರೈತರ ಹಿತಕ್ಕಾಗಿ ಅಧಿಕಾರ ತ್ಯಜಿಸಿ ಅಂಬರೀಷ್‌ ಮಾದರಿಯಾಗಿದ್ದಾರೆ.

    ಶಶಿಕುಮಾರ್‌ - ರಾಜೀನಾಮೆ ಮೂಲಕ ಅಂಬರೀಷ್‌ ಈಗ ನಿಜವಾದ ‘ಮಂಡ್ಯದ ಗಂಡು’. ಅಂಬರೀಷ್‌ ನಿಲುವಿನಿಂದ ಕಾವೇರಿ ಹೋರಾಟಕ್ಕೆ ಸಿಂಹಬಲ ಬಂದಂತಾಗಿದೆ.

    ಜಗ್ಗೇಶ್‌ - ರಾಜೀನಾಮೆ ವಿಚಾರ ಕೇಳಿ ನಿಜಕ್ಕೂ ಸಂತೋಷವಾಯಿತು. ಅಧಿಕಾರವನ್ನು ಎಂದೂ ಕೇರ್‌ ಮಾಡದ ಅಂಬಿ ಅಣ್ಣನ ನಿಲುವು ಶ್ಲಾಘನೀಯ. ಇನ್ನಾದರೂ ಅಂಬರೀಷ್‌ ಬಗೆಗಿನ ಅರ್ಥಹೀನ ಟೀಕೆಗಳು ನಿಲ್ಲಲಿ.

    ಸಾ.ರಾ.ಗೋವಿಂದ್‌ - ಕಾವೇರಿ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟ ಅಂಬಿ ನೇತೃತ್ವದಲ್ಲಿ ಮುಂದುವರೆದು, ಯಶಸ್ಸು ಪಡೆಯಲಿದೆ. ಜನರ ಆಶಯಕ್ಕೆ ರಾಜೀನಾಮೆ ಮೂಲಕ ಅಂಬರೀಷ್‌ ಸ್ಪಂದಿಸಿದ್ದಾರೆ.

    Thursday, April 25, 2024, 20:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X