ರಾಜ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್ ಕಟ್ಟಡಕ್ಕೆ ಬೆಂಕಿ
ಬೆಂಗಳೂರು : ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಸೇರಿದ ವಜ್ರೇಶ್ವರಿ ಕಂಬೈನ್ಸ್ ಚಲನಚಿತ್ರ ವಿತರಣಾ ಕಚೇರಿಗೆ ಬೆಂಕಿಬಿದ್ದಿದ್ದು, ಸಿನಿಮಾ ರೀಲ್ ಮತ್ತು ಪೀಠೋಪಕರಣಗಳು ಭಸ್ಮವಾಗಿವೆ.
ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿರುವ ಈ ಕಚೇರಿಯಿಂದ ಹೊಗೆ ಬರುವುದನ್ನು, ಸಮೀಪದಲ್ಲಿಯೇ ಇರುವ ತಮ್ಮ ನಿವಾಸದಿಂದ ನಟ ಶಿವರಾಜ್ಕುಮಾರ್ ಗಮನಿಸಿದರು. ನಂತರ ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ, ಹೆಚ್ಚಿನ ಹಾನಿ ತಪ್ಪಿಸಿದೆ.
ಮಂಗಳವಾರ ರಾತ್ರಿ 11.20ರ ಸುಮಾರಿನಲ್ಲಿ ಸಂಭವಿಸಿದ ಈ ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. ಕಚೇರಿಗೆ ಬೆಂಕಿ ಬಿದ್ದಾಗ, ಅಲ್ಲಿ ಯಾರು ಇರಲಿಲ್ಲ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications