twitter
    For Quick Alerts
    ALLOW NOTIFICATIONS  
    For Daily Alerts

    ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಕೆ ಎಸ್ ಅಶ್ವತ್ಥ್

    |

    No significant change in Ashwath’s health
    ಗುರುವಾರವಷ್ಟೆ ಚೇತರಿಸಿಕೊಂಡಿದ್ದ ಕನ್ನಡದ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಶುಕ್ರವಾರ ಅಶ್ವತ್ಥ್ ಅವರನ್ನು ಬಿ ಎಂ ಆಸ್ಪತ್ರೆಯ ತೀವ್ರ ನಿಗಾ ಘಟದಲ್ಲಿ ಇಡಲಾಗಿದೆ. ಅಶ್ವತ್ಥ್ ಅವರು ಬೆಳಗ್ಗೆ 11.15ರ ಹೊತ್ತಿಗೆ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದರು. ವೈದ್ಯರು ಅಶ್ವತ್ಥ್ ಅವರನ್ನು ಕೂಡಲೆ ಐಸಿಯುಗೆ ವರ್ಗಾಯಿಸಿ ಆಮ್ಲಜನಕವನ್ನು ನೀಡಿದ್ದಾರೆ.

    ಗೃಹಸಚಿವ ಡಾ.ವಿ ಎಸ್ ಆಚಾರ್ಯ ಆಸ್ಪತ್ರೆಗೆ ಭೇಟಿ ನೀಡಿ ಎಷ್ಟೇ ಪ್ರಯತ್ನಿಸಿದರೂ ಅಶ್ವತ್ಥ್ ಪ್ರತಿಕ್ರಿಯಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಕುಟುಂಬ ವರ್ಗ ಪ್ರಯತ್ನಿಸಿತಾದರೂ ಈ ಪರಿಸ್ಥಿತಿಯಲ್ಲಿ ಕರೆದೊಯ್ಯುವುದು ಬೇಡ ಎಂಬ ವೈದ್ಯರ ಸಲಹೆ ಮೇರೆಗೆ ಕೈಬಿಟ್ಟರು.

    ಬಸಪ್ಪ ಮೆಮೋರಿಯಲ್ ಆಸ್ಪತ್ರೆಗೆ ಬೆಂಗಳೂರಿನ ಕೆಲವು ವೈದ್ಯರನ್ನು ಕರೆಸಲಾಗಿದ್ದು, ಮೆದುಳಿನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವಲ್ಲಿ ವೈದ್ಯರ ತಂಡ ಪ್ರಯತ್ನಿಸುತ್ತಿದೆ. ಕಳೆದ ಐದು ದಿನಗಳಲ್ಲಿ ತಮ್ಮ ತಂದೆಯವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಇದೇ ಮೊದಲು ಎಂದು ಪುತ್ರ ಶಂಕರ್ ಅಶ್ವತ್ಥ್ ತಿಳಿಸಿದರು.

    Saturday, January 16, 2010, 12:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X