Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿಸಿ ಹೊರಟವಳ ಹಿಂದೆ ಬಿದ್ದ ಕುಮಾರ್ ಗೋವಿಂದ್
ಕೆಲವರಿಗೆ ಸಿನಿಮಾ ಗೀಳು ಒಮ್ಮೆ ಹಿಡಿದರೆ ಹಾಗೆ ನೆಲಕಚ್ಚಿದರೂ ಮತ್ತೆ ಮತ್ತೆ ಏಳುವ ಆಸೆಯಿಂದ ಮುಗಿಲ ಕಡೆ ನೋಡುತ್ತಿರುತ್ತಾರೆ. ಸದ್ಯಕ್ಕೆ ನಮ್ಮ ಕುಮಾರ್ ಗೋವಿಂದು ಪರಿಸ್ಥಿತಿ ತುಂಬಾ ಹದಗೆಟ್ಟಿಲ್ಲವಾದರೂ ಯಾವುದೆ ಚಿತ್ರ ಹಿಟ್ ಆಗದೇ ಒಳಗೊಳಗೆ ಕೊರಗುತ್ತಿದ್ದಾರೆ. ಅಕ್ಕರೆಯಿಂದ ಕಾಪಾಡಿಕೊಂಡು ಬಂದ ಸತ್ಯ ಚಿತ್ರ ಇನ್ನಿಲ್ಲದ್ದಂತೆ ಸೋತರೂ, ಮತ್ತೆ ಗೆಲ್ಲುವ ಹುಮ್ಮಸ್ಸಿನಿಂದ ಮೈಕೊಡವಿಕೊಂಡು ಹೊಸ ಯೋಜನೆಗೆ ಕೈ ಹಾಕಿದ್ದಾರೆ.
ಮಂದಾಕಿನಿ ಎಂಬ ಚಿತ್ರ ಮಾಡಿ ಕೈಸುಟ್ಟುಕೊಂಡ ಬಿಕೆ ಶ್ರೀನಿವಾಸ್ ಅವರ ಸಹಾಯ ಹಸ್ತದಿಂದ ಕುಮಾರ್ ಗೋವಿಂದು, "ಪ್ರೀತಿಸಿ ಹೊರಟವಳೆ" ಎಂಬ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಇಬ್ಬರು ಹಿಂದಿನ ಸೋಲನ್ನು ಮರೆತು ಈ ಚಿತ್ರದ ಮೂಲಕ ಹೊಸ ಹಾದಿ ಕಂಡುಕೊಳ್ಳುವ ಆಶಯ ಹೊಂದಿದ್ದಾರೆ.
ಶ್ ನಂತರ ಕುಮಾರ್ ಗೋವಿಂದು ತಮ್ಮ ಬ್ಯಾನರ್ ನಲ್ಲಿ ಅನುರಾಗ ಸಂಗಮ ನಿರ್ಮಿಸಿ ಗೆದ್ದಾಗ ಕನ್ನಡ ಚಿತ್ರರಂಗ ಖುಷಿ ಪಟ್ಟಿತ್ತು. ನಟ ಕುಮಾರ್ ಗೋವಿಂದು ಒಂದು ವೇಳೆ ಸೋತರೂ ನಿರ್ಮಾಪಕ ಗೋವಿಂದು ಗೋತಾ ಹೊಡೆಯಲ್ಲ ಬಿಡಿ ಎಂದು ಗಾಂಧಿನಗರದ ಮಂದಿ ಆಡಿಕೊಳ್ಳುತ್ತಿದ್ದರು.
ಆದರೆ, ಸತತ ಸೋಲು ಕಂಡಿದ್ದ ಕುಮಾರ್, ಸತ್ಯ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಒಳ್ಳೆ ಬೆಲೆ ಮಾರಾಟ ಮಾಡಿ ಸೇಫ್ ಅಗಿದ್ದಾರೆ ಎಂಬ ಸುದ್ದಿಯಿದೆ. ಸತ್ಯ ಚಿತ್ರದ ಛಾಯೆ ಪ್ರೀತಿಸಿ ಹೊರಟವಳೆ ಚಿತ್ರದಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಬಹುತೇಕ ಅದೇ ತಾರಾಗಣವಿದೆ, ಚಿತ್ರ ಬಿಡುಗಡೆ ದಿನಾಂಕವನ್ನು ಪೋಸ್ಟ್ ಪ್ರೊಡೆಕ್ಷನ್ ಜವಾಬ್ದಾರಿ ಹೊತ್ತಿರುವ ಅಶ್ವಿನಿ ಮೀಡಿಯಾ ನೆಟ್ ವರ್ಕ್ಸ್ ನಿರ್ಧರಿಸಬೇಕಿದೆ. ಎನಿವೇ, ಕುಮಾರ್ ಗೆ ಬೆಸ್ಟ್ ಆಫ್ ಲಕ್.