ಚಿತ್ರಕಲಾ ಪರಿಷತ್ ನಲ್ಲಿ 'ರಾ ರಾ' ಎಂದ ನಾಗವಲ್ಲಿ

ಈಗ ನಾಗವಲ್ಲಿ ಕಾಟ ಕೊಡುತ್ತಿರುವುದು ವಿಷ್ಣುವರ್ಧನ್ ಗೆ ಅಲ್ಲವೇ. ಯಾಕಂದ್ರೆ ವಿಷ್ಣು ಈಗಿಲ್ಲ. ಆದರೆ ಆ ಚಿತ್ರದಲ್ಲಿ ಬಳಸಿಕೊಂಡಿದ್ದ ನಾಗವಲ್ಲಿ ಕಲಾಕೃತಿ ರಚಿಸಿರುವ ಕಲಾವಿದ ಮಂಜುನಾಥ ಜಿ ಹೆಗಡೆಗೆ ಅದರ ಸಂಭಾವನೆ ಸಂದಾಯವಾಗಿಲ್ಲ ಎಂಬ ಹೊಸ ಬಾಂಬ್ ಗೆ ನಾಗವಲ್ಲಿ 7 ವರ್ಷಗಳ ನಂತರ ಕಾರಣಳಾಗಿದ್ದಾಳೆ. ಅದನ್ನು ಮಂಜುನಾಥ ಹೆಗಡೆ, ಚಿತ್ರಕಲಾ ಪರಿಷತ್ ನಲ್ಲಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನದ ವೇಳೆ ಹೇಳಿಕೊಂಡಿದ್ದಾರೆ.
"ಚಲಪತಿ ಎಂಬವರು ನಾಗವಲ್ಲಿ ಕಲಾಕೃತಿ ರಚನೆಗಾಗಿ ಒಂದು ಬೋರ್ಡ್ ಹಾಗೂ ಒಂದು ಸಾವಿರ ರು. ಮಾತ್ರ ಕೊಟ್ಟಿದ್ದಾರೆ. ಆಮೇಲೆ ಕೊಡುತ್ತೇನೆಂದವರು ಕೊಟ್ಟಿಲ್ಲ" ಎಂದಿದ್ದಾರೆ ಮಂಜುನಾಥ ಹೆಗಡೆ. ಆದರೆ ಚಲಪತಿ, "ನಾಗವಲ್ಲಿ ನನ್ನ ಸ್ವಂತ ಕೃತಿ. ಅದಕ್ಕೆ ಮಂಜುನಾಥ ಸಹಾಯಕರಷ್ಟೇ. ಅವರಿಗೆ ಕೊಡಬೇಕಾದದ್ದನ್ನು ಕೊಟ್ಟಿದ್ದೇನೆ. ಆಗ ಸುಮ್ಮನಿದ್ದು ಈಗ ಪ್ರಚಾರದ ಆಸೆಯಿಂದ ಗಲಾಟೆ ಎಬ್ಬಿಸಿದ್ದಾರೆ" ಎಂದಿದ್ದಾರೆ. ನಿಜವನ್ನು ನಾಗವಲ್ಲಿಯೇ ಹೇಳಬೇಕು (ಒನ್ ಇಂಡಿಯಾ ಕನ್ನಡ)
More from Filmibeat
English summary
Manjunath Hegde, who is the maker of apthamitra nagavalli painting did not get his Remuneration for that. In this way again nagavalli came in to news.
ವಿಷ್ಣುವರ್ಧನ್ ನೆನಪು ಪಿ ವಾಸು ಆಪ್ತರಕ್ಷಕ ಸಾಹಸಸಿಂಹ ರಜನಿಕಾಂತ್ ನಾಗವಲ್ಲಿ ಸೌಂದರ್ಯ ಸಾವು rajinikanth nagavalli vishnuvardhan soundarya death aptharakshaka vimala raman


Click it and Unblock the Notifications











