Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಾಲಿಗೆ ಕಾಲಿರಿಸಿದ ಕನ್ನಡದ ಹುಡುಗಿ ಛಾಯಾ
ಪ್ರಬುದ್ಧ ಪಾತ್ರಗಳತ್ತ ಗಮನ ಹರಿಸಿ, ಗಮನಾರ್ಹ ಅಭಿನಯ ನೀಡಿದರೂ, ಸ್ಯಾಂಡಲ್ ವುಡ್, ಕಾಲಿವುಡ್ ನಲ್ಲಿ ಭದ್ರವಾಗಿ ನೆಲೆ ನಿಲ್ಲಲು ನಟಿ ಛಾಯಾ ಸಿಂಗ್ ಗೆ ಯಾಕೋ ಆಗಿಲ್ಲ. ಕನ್ನಡದ್ದಲ್ಲಂತೂ ಬೇಡಿಕೆಯೇ ಇಲ್ಲ ಎನ್ನಬಹುದು. ಅಕಾಶಗಂಗೆ ನಂತರ ಛಾಯಾ ಈ ಕಡೆ ಕಾಣಿಸಿದ್ದಿಲ್ಲ.
ಇನ್ನು ಕಾಲಿವುಡ್ ನಲ್ಲಿ 'ತಿರುಡಾ ತಿರುಡಿ' ಚಿತ್ರದಲ್ಲಿ ಛಾಯಾ ನೀಡಿದ ಮಿಂಚಿನಂಥ ಅಭಿನಯವನ್ನೇ ಪ್ರತಿ ಬಾರಿ ಆಕೆಯ ಅಭಿಮಾನಿಗಳು ಬಯಸತೊಡಗಿದ್ದು, ಬಹುಶಃ ಆಕೆಯ ಸಿನಿ ಜೀವನಕ್ಕೆ ಮುಳುವಾಯಿತೆನ್ನಬಹುದು.
ವಿಮರ್ಶಕ ಮೆಚ್ಚುಗೆಯನ್ನೂ ಗಳಿಸುವಲ್ಲಿ ಸಫಲರಾಗಿರುವ ಛಾಯಾ, ಮಲೆಯಾಳಂನಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಿದೆ. ತಮಿಳಿನಲ್ಲಿ 'ವಲ್ಲಮೈ ಥರಯೋ 'ಚಿತ್ರದ ಅಭಿನಯಕ್ಕೆ ಮೆಚ್ಚುಗೆ ಗಳಿಸಿದ ಮೇಲೆ 'ಅನಂತಪುರಥು ವೀಡು' ಚಿತ್ರ ಒಪ್ಪಿಕೊಂಡ ಛಾಯಾ ಅದರಲ್ಲೂ ಯಶಸ್ವಿಯಾದರು. ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ವ್ಯಾಪಾರ ಆರಂಭಿಸಿದೆ.
ಆದರೆ, ಈಗ ಬೇಡಿಕೆ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಛಾಯಾ ಸಿಂಗ್, ಇನ್ನೂ ಹೆಸರಿಡದ ಬೆಂಗಾಲಿ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಾಲಿಗೆ ಹಾರಲು ಏನು ಕಾರಣ ಎಂದರೆ, ಚಿತ್ರದ ಪಾತ್ರ ಆ ರೀತಿ ಇದೆ. ಕುಟುಂಬದ ಪೂರ್ತಿ ಹೊಣೆ ಹೊತ್ತು, ಯಶಸ್ವಿಯಾಗುವ ಸೊಸೆಯ ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಛಾಯಾ. ಒಟ್ಟಿನಲ್ಲಿ ಕನ್ನಡದ ಕುಸುಮದ ಛಾಯೆ ಎಲ್ಲೆಡೆ ದರಿಸುತ್ತಿದೆ ಗುಡ್ ಲಕ್.