twitter
    For Quick Alerts
    ALLOW NOTIFICATIONS  
    For Daily Alerts

    ಬೆಳ್ಳಿಮೋಡ ಛಾಯಾಗ್ರಾಹಕ ಆರ್‌ಎನ್ ಕೃಷ್ಣಪ್ರಸಾದ್ ನಿಧನ

    By Rajendra
    |

    Cinematographer R.N. Krishna Prasad
    ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಆರ್.ನಾಗೇಂದ್ರರಾಯರ ದ್ವಿತೀಯ ಪುತ್ರ ಆರ್.ಎನ್.ಕೃಷ್ಣ ಪ್ರಸಾದ್ ಬುಧವಾರ (ಫೆ.15) ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಇವರು ಖ್ಯಾತ ಸಾಹಿತಿ ಆರ್.ಎನ್.ಜಯಗೋಪಾಲ್ ಹಾಗು ನಟ ಆರ್.ಎನ್.ಸುದರ್ಶನ್ ಅವರ ಸಹೋದರ.

    ಆರ್.ನಾಗೇಂದ್ರರಾಯರ ನಿರ್ಮಾಣದ ರಾಷ್ಟ್ರಪ್ರಶಸ್ತಿ ವಿಜೇತ 'ಪ್ರೇಮದ ಪುತ್ರಿ' ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಕಾರ್ಯ ಆರಂಭಿಸಿದ ಇವರು ವಿಜಯನಗರದ ವೀರಪುತ್ರ, ಬೆಳ್ಳಿ ಮೋಡ, ಭಲೇ ಅದೃಷ್ಠವೋ ಅದೃಷ್ಠ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.

    ಆರ್.ಎನ್.ಸುದರ್ಶನ್ ನಿರ್ಮಿಸಿ ನಟಿಸಿದ್ದ 'ನಗುವ ಹೂವು' ಚಿತ್ರಕ್ಕೆ ಛಾಯಾಗ್ರಹಣ ಮಾಡುವುದರೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ಈ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಜೀವಮಾನದ ಶ್ರೇಷ್ಠ ಸಾಧನೆಗಾಗಿ ರಾಜ್ಯ ಸರ್ಕಾರ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿ ಕೃಷ್ಣಪ್ರಸಾದ್ ಅವರಿಗೆ ಬಂದಿತ್ತು.

    ಕಮಲ್ ಹಾಸನ್ ಅಭಿನಯದ ಮೈಕಲ್ ಮದನಕಾಮರಾಜನ್ ಚಿತ್ರದಲ್ಲಿ ಕಮಲ್ ಹಾಸನ್ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿ ತಮಿಳು ಚಿತ್ರರಂಗದಲ್ಲೂ ಖ್ಯಾತರಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ಪ್ರೇಮ್ ಅಭಿನಯದ 'ಗೌತಮ್' ಚಿತ್ರವನ್ನು ನಿರ್ದೇಶಿಸಿದ ರಾಜೀವ್ ಪ್ರಸಾದ್ ಅವರು ಕೃಷ್ಣಪ್ರಸಾದ್ ಅವರ ಪುತ್ರ. ಪತ್ನಿ ಉಷಾಪ್ರಸಾದ್, ಪುತ್ರ ರಾಜೀವ್ ಪ್ರಸಾದ್, ಪುತ್ರಿ ರತ್ನಮಾಲ ಅವರನ್ನು ಕೃಷ್ಣಪ್ರಸಾದ್ ಅಗಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

    English summary
    Kannada films noted cinematographer R.N. Krishna breathed his last in Chennai on Wednesday (Feb 15) evening. He has a brother of R.N. Jayagopal, a venerated lyricist and actor R.N. Sudarshan. Belli Moda, Vijayanagara Veeraputra, Pramada Putri are his memorable movies.
    Thursday, February 16, 2012, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X