twitter
    For Quick Alerts
    ALLOW NOTIFICATIONS  
    For Daily Alerts

    ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್

    By Staff
    |

    Dayal
    ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ 'ಸರ್ಕಸ್' ಚಿತ್ರ ಪದ್ಮರಾಜ್ ದಯಾಳ್ ಅವರಿಗೆ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಈ ಚಿತ್ರ ಅವರ ಪಾಲಿಗೆ ಅಗ್ನಿ ಪರೀಕ್ಷೆ. ಒಂದರ್ಥದಲ್ಲಿ ಅವರು ನಿಜಕ್ಕೂ ಸರ್ಕಸ್ ಮಾಡುತ್ತಿದ್ದಾರೆ.

    ಕಾರಣ ಇಷ್ಟೆ, ಗಣೇಶ್ ರ ಅರಮನೆ, ಬೊಂಬಾಟ್, ಸಂಗಮ ಚಿತ್ರಗಳು ಸೋಲುಂಡಿವೆ. ಈಗ 'ಸರ್ಕಸ್' ಮೇಲೆ ಅವರು ಅಪಾರ ಭರವಸೆ ಇಟ್ಟಿದ್ದಾರೆ. ಆ ಚಿತ್ರವನ್ನು ಹೇಗಾದರು ಮಾಡಿ ಗೆಲ್ಲಿಸಬೇಕೆಂದು ಛಲ ತೊಟ್ಟಿದ್ದಾರೆ. ದಯಾಳ್ ರ ಛಲಕ್ಕೆ ಗಣೇಶ್ ಸಹ ಹೆಗಲು ಕೊಟ್ಟಿದ್ದಾರೆ. ಒಂದು ಹಂತದಲ್ಲಿ ಸರ್ಕಸ್ ಚಿತ್ರಕಥೆಯನ್ನು ಬದಲಾಯಿಕೊಳ್ಳುವ ಮಟ್ಟಿಗೆ ದಯಾಳ್ ಭಯಭೀತರಾಗಿದ್ದರು. ಈ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು.

    ಒಟ್ಟಿನಲ್ಲಿ ದಯಾಳ್ 'ಸರ್ಕಸ್' ಚಿತ್ರವನ್ನು ಸರ್ವಾಂಗ ಸುಂದರವಾಗಿ ಮೂಡಿಬರುವಂತೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವು ಸತ್ಯ. ಗಣೇಶ್ ಗಿಂತಲೂ ದಯಾಳ್ ಗೆ ಈ ಚಿತ್ರ ಮುಖ್ಯವಾಗಿಬಿಟ್ಟಿದೆ. ಆ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Tuesday, December 16, 2008, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X