twitter
    For Quick Alerts
    ALLOW NOTIFICATIONS  
    For Daily Alerts

    ಎಚ್ ಡಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಪ್ರತಿಕ್ಷಣ

    By Rajendra
    |

    ಧನುಷ್ ನಿರ್ದೇಶನದ 'ಪ್ರತಿಕ್ಷಣ' ಚಿತ್ರಕ್ಕೆ ಸ್ಲೈಲೈನ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿಯಿದೆ ಎನ್ನುತ್ತಾರೆ ಧನುಷ್

    ಪ್ರೇಮಪ್ರಧಾನ ಈ ಚಿತ್ರದ ನಾಯಕ ಪ್ರೀತಮ್. ಸಂಗೀತಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಬ್ಯಾಂಕ್‌ಜನಾರ್ದನ್, ಟೆನ್ನಿಸ್‌ಕೃಷ್ಣ, ಚಿದಾನಂದ್, ಪ್ರತಾಪ್(ಕುರಿಗಳು), ಹರೀಶ್‌ರಾಯ್ ಮುಂತಾದವರಿದ್ದಾರೆ.

    ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚೇತನ್ ಪ್ರೊಡಕ್ಷನ್ಸ್ ಮೂಲಕ ಟಿ.ಎನ್.ಹರೀಶ್‌ಕುಮಾರ್(ಧಣಿಸಂದ್ರ) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿದ್ದಾರೆ. ಕರುಣೇಶ್ ಛಾಯಾಗ್ರಹಣ, ಇ.ಆರ್.ವಿನಯ್ ಸಂಗೀತ, ಗಂಗಾಧರ್, ಪರಮೇಶ್ ನೃತ್ಯ, ಅಲ್ಟಿಮೆಟ್ ಶಿವು ಸಾಹಸ ಹಾಗೂ ಭರತ್ ಅವರ ನಿರ್ಮಾಣ ನಿರ್ವಹಣೆ 'ಪ್ರತಿಕ್ಷಣ' ಚಿತ್ರಕ್ಕಿದೆ.

    Wednesday, June 16, 2010, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X