Don't Miss!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಸಿನಿಮಾಗಳನ್ನು ಕೊಳ್ಳೋರಿಲ್ಲ!
ಉಪೇಂದ್ರ ಚಿತ್ರಗಳಿಗೆ ಮಾರುಕಟ್ಟೆ ಬ್ದಿದುಹೋಗಿದೆ ಎನ್ನುತ್ತಿದೆ ಗಾಂಧಿನಗರ. 'ರಜನಿ" ಚಿತ್ರವನ್ನು ನಿರ್ಮಾಪಕ ರಾಮು ಸೇಲಿಗಿಟ್ಟರೂ ಯಾರು ಮೂಸಿನೋಡಲಿಲ್ಲ. ಅದಕ್ಕೇ ಈಗ ಅವರೇ ಚಿತ್ರವನ್ನು ಈ ವಾರ ಬಿಡುಗಡೆ ಮಾಡುತ್ತಿದ್ದಾರೆ.
'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್"ಗೆ ಆಗಿರುವ ಗತಿಯೂ ಇದೇ. ಐಡಿಬಿಐ ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರವನ್ನು ಯಾರಾದರೂ ವಿತರಕರು ಕೊಂಡರಷ್ಟೇ ನೆಮ್ಮದಿಯ ನಿಟ್ಟುಸಿರಿಡಲು ಸಾಧ್ಯ. ಆದರೆ, ನಾಲ್ಕು ತಿಂಗಳಿಂದ ವ್ಯಾಪಾರ ಕುದುರಿಸಲು ಅವರಿಗೆ ಸಾಧ್ಯವಾಗಿಲ್ಲ.
'ದುಬೈ ಬಾಬು" ಚಿತ್ರ ಮಕಾಡೆಯಾದದ್ದರ ಫಲ- ನಿರ್ಮಾಪಕ ಶೈಲೇಂದ್ರ ಬಾಬು ಅವರಿಗೆ ಮೂರೂಮುಕ್ಕಾಲು ಕೋಟಿ ಲುಕ್ಸಾನು. ಅದು ಹಾಗೂ ಹಿಂದಿನ ಅನೇಕ ಉಪೇಂದ್ರ ಚಿತ್ರಗಳ ಸೋಲು ಅವರ ಚಿತ್ರಗಳಿಗೆ ಮಾರುಕಟ್ಟೆಯೇ ಇಲ್ಲವೆಂಬ ಪರಿಸ್ಥಿತಿ ಹುಟ್ಟುಹಾಕಿದೆ. ಕೊಳ್ಳಲು ಮುಂದೆ ಬಂದರೂ ಕೇಳುವ ಬೆಲೆಗೂ ಚಿತ್ರದ ವೆಚ್ಚಕ್ಕೂ ಸ್ವಲ್ಪವೂ ತಾಳೆಯಾಗುವುದಿಲ್ಲ.
ಹೀಗಿದ್ದೂ ಉಪೇಂದ್ರ ಮಾತ್ರ ತಮ್ಮ ಸಂಭಾವನೆಯಲ್ಲಿ ಚಿಕ್ಕಾಸೂ ಇಳಿಸಿಲ್ಲ. ಈ ವರ್ಷದೊಳಗೆ ಹೊಸ ಚಿತ್ರದ ನಿರ್ದೇಶಿಸಲಿರುವ ಉಪೇಂದ್ರ ಆ ಬಗ್ಗೆ ಮಾತ್ರ ಕುತೂಹಲ ಮೂಡಿಸಿದ್ದಾರೆ. ಈಗ ಎದ್ದಿರುವ ಪ್ರಶ್ನೆಗಳಿಗೆ ಆ ಚಿತ್ರವೇ ಉತ್ತರವಾಗಲಿದೆ ಎಂಬುದಂತೂ ಸತ್ಯ. ಹಾಲಿವುಡ್, ಮಸ್ತಿಯಂಥ ಚಿತ್ರಗಳ ಮೂಲಕ ದೊಡ್ಡ ಪೆಟ್ಟು ತಿಂದಿರುವ ರಾಮು 'ರಜನಿ" ಮೂಲಕವಾದರೂ ಸೇಫ್ ಆಗುತ್ತಾರಾ ಎಂಬುದು ಸದ್ಯದ ಇನ್ನೊಂದು ಕುತೂಹಲ.