Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೋಗಯ್ಯ ಮರೆತುಬಿಡಿ, ಎಂಜಾಯ್ 'ಶಿವ' ಅಂದ ಶಿವಣ್ಣ
ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತಿದೆ ಎಂಬುದು ಶಿವರಾಜ್ ಕುಮಾರ್ ಮಾತಿನಿಂದ ಪದೇ ಪದೇ ಸ್ಪಷ್ಟವಾಗುತ್ತಿದೆ. ಈಗ ಆ ಸೋಲಿನಿಂದ ಹೊರಬಂದು ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ ಜೋಗಯ್ಯ ಸಿನಿಮಾ ಮರೆಯಲು ಹೇಳಿದ್ದಾರೆ.
'ಶಿವ' ಚಿತ್ರಕ್ಕಾಗಿ ಹಾಕಲಾಗಿದ್ದ ಸ್ಮಶಾನದ ಸೆಟ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಶಿವಣ್ಣ, ಈ ಚಿತ್ರ ಅಭಿಮಾನಿಗಳನ್ನು ಸೀಟಿನ ತುದಿಯಲ್ಲಿ ತಂದು ಕೂರಿಸಲಿದೆ. ಹೀರೋಯಿಸಂ ಇಲ್ಲಿ ಪ್ರಧಾನ. ಖಂಡಿತಾ ಜೋಗಯ್ಯದಲ್ಲಿ ಆಗಿರುವಂತೆ ಇಲ್ಲಿ ಯಾರಿಗೂ ನಿರಾಸೆಯಾಗದು" ಎಂದಿದ್ದಾರೆ. 'ಗ್ಲಾಮರ್ ಡಾಲ್' ರಾಗಿಣಿ ಶಿವಣ್ಣನ ನಾಯಕಿ.
ಈ ಬಗ್ಗೆ ಓಂ ಪ್ರಕಾಶ್ ರಾವ್ "ನಾನು ಎಕೆ47 ನಲ್ಲಿ ನೋಡಿದ ಶಿವಣ್ಣನಿಗೂ, ಇಂದಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈಗ ಶಿವಣ್ಣ ಪ್ರಬುದ್ಧ ನಾಯಕ. ಸಿನಿಮಾ ಸುಧಾರಣೆಗಾಗಿ ಸಲಹೆ ನೀಡುವಷ್ಟು ಈಗ ಬೆಳೆದಿದ್ದಾರೆ. ಶಿವ ಈಗಿನ ಜಮಾನಕ್ಕೆ ಹೊಂದಿಕೆಯಾಗುವ ಸಿನಿಮಾ. ಖಂಡಿತಾ 'ಟ್ರೆಂಡ್ ಸೆಟ್ಟರ್' ಆದರೂ ಅಚ್ಚರಿಯಿಲ್ಲ. ನನ್ನ ಎಲ್ಲಾ ಚಿತ್ರಗಳಿಗಿಂತ ಇದು ಸ್ಟೈಲಿಶ್" ಅಂದಿದ್ದಾರೆ ಓಂ. (ಒನ್ ಇಂಡಿಯಾ ಕನ್ನಡ)