Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಈಗ ಸಿಟ್ಟೇಂದ್ರ!
ಮಚ್ಚಿನ ವೀರ ದರ್ಶನ್ ಮತ್ತು ಸುದೀಪ್ ಬಳಿಕ ಈಗ ನಟ ಉಪೇಂದ್ರ ಪತ್ರಕರ್ತರ ಮೇಲೆ ಮುನಿಸಿಕೊಂಡಿದ್ದಾರೆ. ಯಾಕೆ ಹೀಗೆಲ್ಲ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
‘ಜೋಗಿ’ ಚಿತ್ರದ ನಿರ್ದೇಶಕ ಪ್ರೇಮ್ ಬಗ್ಗೆ ಉಪೇಂದ್ರ ಅವರಿಗೆ ಅಸೂಯೆ ಇದೆ ಎಂಬ ವರದಿಗಳ ಬಗ್ಗೆ ಬೇಸರಗೊಂಡಿದ್ದಾರೆ.
‘ನಾನು ಶಿವಣ್ಣ ಒಳ್ಳೆಯ ಗೆಳೆಯರು, ಜೋಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎನ್ನುವ ಉಪೇಂದ್ರ, ಉಪೇಂದ್ರ ಏನು ಅನ್ನೋದನ್ನು ಯಾಕೆ ಬರೆಯುತ್ತಿಲ್ಲ. ನನ್ನ ಹೊಸ ಪ್ರಯತ್ನಗಳನ್ನು, ನನ್ನ ಪರಿಶ್ರಮವನ್ನು ಯಾಕೆ ಗುರ್ತಿಸಿ ಜನರಿಗೆ ತಿಳಿಸುತ್ತಿಲ್ಲ ಎಂದು ಪತ್ರಕರ್ತರನ್ನು ಆಟೋಶಂಕರ್ ಪಾರ್ಟಿಯಲ್ಲಿ ತರಾಟೆಗೆ ತೆಗೆದುಕೊಂಡರು.
‘ಎಚ್2ಓ’ ಚಿತ್ರದ ಕಹಿ ಅನುಭವ ನನ್ನನ್ನು ನಿರ್ದೇಶನದಿಂದ ದೂರ ಮಾಡಿತ್ತು. ಕೇವಲ ಒಂದೂವರೆ ತಿಂಗಳ ವೇತನಕ್ಕೆ ಒಂದೂವರೆ ವರ್ಷ ದುಡಿದಿದ್ದೇನೆ. ಆದರೂ ನನ್ನ ಮೇಲೆ ಗೂಬೆ ಕೂರಿಸಲಾಯಿತು ಎನ್ನುವುದು ಉಪೇಂದ್ರ ಅವರ ಸಿಟ್ಟು.
ಕಲ್ಕಿ ಅವತಾರ : ಸೆ.18 ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಹೊಸ ಚಿತ್ರ ‘ಕಲ್ಕಿ’ ಸೆಟ್ಟೇರುತ್ತಿದೆ. ‘ರಕ್ತ ಕಣ್ಣೀರು’ ತಂಡವೇ ಈ ಚಿತ್ರದಲ್ಲೂ ಇದೆ. ಮುಣಿರತ್ನ ನಿರ್ಮಾಣದ ಈ ಚಿತ್ರವನ್ನು ತೆಲುಗಿನ ಪೋಸಾನಿ ಕೃಷ್ಣ ನಿರ್ದೇಶಿಸುವರು.
ಚಿಂದಿ ಆಯುವವ ಇನ್ಸ್ಪೆಕ್ಟರ್ ಆಗಿ, ಕೊನೆಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಹತ್ತುವ ಕಥೆಯನ್ನು ಚಿತ್ರ ಹೊಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿದ್ದು, ಉಪ್ಪಿ ಅಭಿಮಾನಿಗಳಿಗೆ ಮುಕ್ತವಾಗಿ ಸ್ವಾಗತ ಕೋರಲಾಗಿದೆ.
ಸೆ.18ರಂದೇ ನಟ ವಿಷ್ಣುವರ್ಧನ್ ಮತ್ತು ಶ್ರುತಿ ಅವರ ಹುಟ್ಟುಹಬ್ಬವೂ ಉಂಟು.
ಮುಖಪುಟ / ಸ್ಯಾಂಡಲ್ವುಡ್