Don't Miss!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- News ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ: ಜೆಡಿಎಸ್ ಕೊನೆಯ ಕ್ಷಣದ ನಿರ್ಧಾರವೇನು..?
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿರಿವಂತ : ದೇವೇಗೌಡರು ಟಾಕೀಸಿಗೆ ಬಂದ್ರು!
ಒಂದು ಕಡೆ ಜನಾರ್ದನ ರೆಡ್ಡಿ ಗಣಿ ಕಪ್ಪದ ಸಿ.ಡಿ.ಗಳನ್ನು ದಿನಕ್ಕೊಂದರಂತೆ ಸಿಡಿಸಿ, ದೇವೇಗೌಡರ ಪುತ್ರ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸುತ್ತಿದ್ದಾರೆ. ಇತ್ತ ದೇವೇಗೌಡರು, ವಿಷ್ಣುವರ್ಧನ್ ಅಭಿನಯದ ‘ಸಿರಿವಂತ’ ಸಿನಿಮಾ ನೋಡಿ, ತೃಪ್ತಿಯಿಂದ ತೇಗುತ್ತಿದ್ದಾರೆ!
ಅವರಿಗೇನು ಬಂತು, ಸಿನಿಮಾ ಶೋಕಿ ಅನ್ನುವಂತಿಲ್ಲ. ಅವರು ನೋಡಿದ ಸಿನಿಮಾಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವರು ನೋಡಿದ ಎಲ್ಲಾ ಸಿನಿಮಾಗಳು ಶತದಿನೋತ್ಸವದ ಸಂಭ್ರಮ ಅನುಭವಿಸಿವೆ! ತಮ್ಮ ನಿದ್ರೆ, ಆಕಳಿಕೆ.. ಕ್ಷಮಿಸಿ ಕ್ಷಮಿಸಿ, ತಮ್ಮ ರಾಜಕಾರಣ, ರೈತ ಕಾಳಜಿ ಮಧ್ಯೆ ಅವರಿಗೆ ಸಿನಿಮಾ ನೋಡೋದಕ್ಕೆ ಕಾಲದ ಅಭಾವ.
ಈ ಹಿಂದೆ ಅವರು ನೋಡಿದ್ದ ಭಕ್ತಕುಂಬಾರ ಮತ್ತು ಬಂಗಾರದ ಮನುಷ್ಯ ಸಕತ್ತು ಯಶಸ್ಸು ಪಡೆದದ್ದು ಎಲ್ಲರಿಗೂ ಗೊತ್ತು. ಆನಂತರ ದೇವೇಗೌಡರು ಸೂರ್ಯವಂಶ, ಚಂದ್ರಚಕೋರಿ(ಈ ಚಿತ್ರಗಳ ನಿರ್ಮಾಪಕರು; ಕುಮಾರಸ್ವಾಮಿ!) ನೋಡಿದರು. ಅವು ಯಶಸ್ಸಿನ ಗುರಿ ಮುಟ್ಟಿದವು. ಈಗ ‘ಸಿರಿವಂತ’ನ ಸರದಿ?
‘ಇದು ರಾಷ್ಟ್ರಪ್ರಶಸ್ತಿಗೆ ಅರ್ಹವಾದ ಕನ್ನಡದ ಮೇರು ಚಿತ್ರ. ವಿಷ್ಣುವರ್ಧನ್ ಅಭಿನಯ ಕಂಡು ನಾ ಸೋತು ಹೋದೆ. ರಾಜ್ ಕುಮಾರ್ರಂತೆಯೇ ವಿಷ್ಣು ಚೆನ್ನಾಗಿ ಅಭಿನಯಿಸಬಲ್ಲರು’ ಎಂದು ದೇವೇಗೌಡರು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಈ ಮಳೆಯಲ್ಲಿ ನೆಂದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ಎಸ್.ನಾರಾಯಣ್ ರೋಮಾಂಚಿತರಾಗಿದ್ದಾರೆ! ಅದು ಅವರ ಪಾಲಿನ ಅಮೃತಧಾರೆ!
ಚಿತ್ರ ಸೆ.28ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗಲಿದೆ. ‘ಸಿರಿವಂತ’, ಯಾರಿಗೆ ಸಿರಿತರುವನೋ ಟಾಕೀಸಿಗೆ ಬರಲಿ ನೋಡೋಣ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅವರ ಮರೆಯಲ್ಲಿ ಕಾಂಗ್ರೆಸ್ಸಿಗರು!