Don't Miss!
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಲಕ್ಕೆ ಸಾಲಾನಾ ಸಾಲ ಕೊಡುವ ಗಣೇಶ ತೆರೆಗೆ ಬಂದ!
ಅನಂತನಾಗ್ ಮತ್ತು ಜಗ್ಗೇಶ್ ಈವಾರ ನಗೆಪಾತ್ರೆಯನ್ನು ಹೊತ್ತು ತಂದಿದ್ದಾರೆ. 'ಗಣೇಶ'ಚಿತ್ರ ಶುಕ್ರವಾರ(ನ.16) ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
'ಸಾಲಕ್ಕೆ ಸಾಲಾನಾ ಸಾಲ ಕೊಡುವೆ'ಅಡಿ ಶೀರ್ಷಿಕೆಯೇ ಚಿತ್ರದ ತಾಕತ್ತನ್ನು ಬಿಡಿಸಿಟ್ಟಿದೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವ ದಿನೇಶ್ ಬಾಬು, ಚಿತ್ರದಲ್ಲಿ ನಗೆ ಬೆಳದಿಂಗಳ ಸುರಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಹೊಸಪೇಟೆ ಶ್ರೀನಿವಾಸ್ ಮತ್ತು ಕೆ.ವಿ.ಆರ್.ಕೃಷ್ಣ ಚಿತ್ರದ ನಿರ್ಮಾಪಕರು. ಅಜಯ್, ರಂಗಾಯಣ ರಘು, ಹರೀಶ್ ರಾಯ್, ಮನ್ ದೀಪ್ ರಾಯ್, ಧರ್ಮ, ವನಿತಾ ವಾಸು ತಾರಾಗಣದಲ್ಲಿದ್ದಾರೆ. ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಪುತ್ರ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ರಾಂನಾರಾಯಣ್, ಗಂಧರ್ವ ಹಾಡು ಬರೆದಿದ್ದಾರೆ.
ಸಂತೋಷ್, ವೀರೇಶ್, ಸಿದ್ದಲಿಂಗೇಶ್ವರವೆಂಕಟೇಶ್ವರ, ತುಮಕೂರಿನ ಗಾಯತ್ರಿ, ಮೈಸೂರಿನ ಗೋಕುಲ್, ಹಾಸನದ ಭಾನು, ಚಿತ್ರದುರ್ಗದ ಬಸವೇಶ್ವರ, ಶಿವಮೊಗ್ಗದ ಮಲ್ಲಿಕಾರ್ಜುನ, ದಾವಣಗೆರೆಯ ಗೀತಾಂಜಲಿ, ಹುಬ್ಬಳ್ಳಿಯ ಪದ್ಮ, ಬೆಳಗಾವಿಯ ನಿರ್ಮಲ್, ಗದಗದ ಕರ್ನಾಟಕ್ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)