twitter
    For Quick Alerts
    ALLOW NOTIFICATIONS  
    For Daily Alerts

    ಮಾಲಾಶ್ರೀ ಅಭಿಮಾನಿಗಳಿಗೊಂದು ಖುಷಿ ಸಮಾಚಾರ!!!

    By Staff
    |

    ಮಾಲಾಶ್ರೀ ಅಭಿನಯದ ಹೊಸ ಚಿತ್ರ ‘ಕಿರಣ್‌ ಬೇಡಿ’ 2007ರ ಮಧ್ಯದಲ್ಲಿ ಸೆಟ್ಟೇರಲಿದೆ. ಕಿರಣ್‌ ಬೇಡಿ ಜೀವನ ಚರಿತ್ರೆಯನ್ನು ಆಧರಿಸಿ, ಚಿತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾಲಾಶ್ರೀಗಂತೂ ಚಿತ್ರದ ಬಗ್ಗೆ ಸಕತ್ತು ಹೆಮ್ಮೆ. ಗಂಡನ ಜೇಬು ತುಂಬಿಸುವ ವಿಶ್ವಾಸ!

    ತಮ್ಮ ಪತ್ನಿಗಾಗಿ ರಾಮು ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ‘ಕಿರಣ್‌ ಬೇಡಿ’ಗೂ ಮೊದಲು ‘ಗೂಳಿ’ ಚಿತ್ರವನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಮೆಜೆಸ್ಟಿಕ್‌, ಸ್ವಾಮಿ, ತಂಗಿಗಾಗಿ, ಸರ್ದಾರ ನಿರ್ದೇಶಿಸಿದ ಪಿ.ಎನ್‌.ಸತ್ಯ ಚಿತ್ರದ ನಿರ್ದೇಶಕರು. ಚಿತ್ರದ ನಾಯಕ; ಸುದೀಪ್‌. 2007ರ ಈ ಯೋಜನೆಗಳು, ಜೇಬು ತುಂಬಿಸುತ್ತವೆ ಎಂಬ ವಿಶ್ವಾಸ ರಾಮು ಅವರದಲ್ಲಿದೆ.

    2007ರ ಜನವರಿಯಲ್ಲಿ ‘ಪ್ರೀತಿಗಾಗಿ’ ಬಿಡುಗಡೆ ಮಾಡುವುದಾಗಿ ಹೇಳುವ ರಾಮು, ಉಪೇಂದ್ರ ನಾಯಕರಾಗಿ ಅಭಿನಯಿಸುತ್ತಿರುವ ‘ಮಸ್ತಿ’ ಚಿತ್ರಕ್ಕೀಗ ದುಡ್ಡು ಸುರಿಯುತ್ತಿದ್ದಾರೆ. ಅವರಿಗೆ ಲಕ್ಷ್ಮಿಕಟಾಕ್ಷ ಸದಾ ಇರಲಿ.

    Tuesday, April 23, 2024, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X