Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೈರಸಿ ತಡೆಗೆ ಆನಂದ್ ಆಡಿಯೋ ಹೊಸ ತಂತ್ರಜ್ಞಾನ
ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ಪೈರಸಿ ತಡೆಯಲು ಕರ್ನಾಟಕದ ಜನಪ್ರಿಯ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಮುಂದಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಪೈರಸಿ ಪಿಡುಗನ್ನು ಕರ್ನಾಟಕದಿಂದ ಕಿತ್ತೊಗೆಯುವ ದೃಢ ಹೆಜ್ಜೆ ಇಟ್ಟಿದೆ ಆನಂದ್ ಆಡಿಯೋ.
'ಗ್ಲಾಸ್ ಮಾಸ್ಟರ್ ಲಾಕಿಂಗ್ ಸಿಸ್ಟಂ' ಎಂಬ ತಂತ್ರಜ್ಞಾನ ನಕಲಿ ಸೀಡಿ ದಂಧೆಗೆ ರಾಮಬಾಣವಾಗಲಿದೆ. ಕ್ಯಾಲಿಕಟ್ ಮೂಲದ ಸಂಗೀತ್ ಮೆನನ್ ಎಂಬುವರು ಈ ಹೊಸ ಮಾದರಿಯ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಇಳಯರಾಜ ಸಂಗೀತ ನಿರ್ದೇಶನದ 'ಭಾಗ್ಯದ ಬಳೆಗಾರ' ಸೀಡಿಗಳು ಈ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿವೆ.
ಈ ತಂತ್ರಜ್ಞಾನದ ಕಾರಣ ಅಸಲಿ ಸೀಡಿಗಳನ್ನು ಕಾಪಿ ಮಾಡಲು ಸಾಧ್ಯವಾಗುವುದಿಲ್ಲ. ಆಡಿಯೋವನ್ನು ರೆಕಾರ್ಡ್ ಮಾಡಿ ನಕಲಿ ಸೀಡಿ ತಯಾರಿಸಿದರೂ ಮೂಲ ಗುಣಮಟ್ಟ ಉಳಿಯುವುದು ಕಷ್ಟ ಎನ್ನುತ್ತಾರೆ ಆನಂದ್ ಆಡಿಯೋದ ಮೋಹನ್ ಛಬ್ರಿಯಾ. ಇದರ ಬಳಕೆಯಿಂದ ಸೀಡಿಯೊಂದಕ್ಕೆ ಹೆಚ್ಚುವರಿಯಾಗಿ ರು.3 ಖರ್ಚಾಗುತ್ತದೆ ಎನ್ನುತ್ತಾರೆ ಮೋಹನ್ ರ ಕಿರಿಯ ಸಹೋದರ ಶ್ಯಾಮ್.
ಕಳೆದ ವರ್ಷ 5.1 ಹೈ ಕ್ಲಾಸ್ ತಂತ್ರಜ್ಞಾನದಲ್ಲಿ 'ಆ ದಿನಗಳು' ಡಿವಿಡಿಯನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿತ್ತು. ಈ ಡಿವಿಡಿಗಳು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತವೆ. ಮುಂಗಾರು ಮಳೆ, ಮಿಲನ, ಹುಡುಗಾಟ, ಬಿಂದಾಸ್, ಸತ್ಯವಾನ್ ಸಾವಿತ್ರಿ ಮತ್ತು ಆಕ್ಸಿಡೆಂಡ್ ಚಿತ್ರಗಳು 5.1 ಹೈ ಕ್ಲಾಸ್ ತಂತ್ರಜ್ಞಾನದಲ್ಲಿ ಹೊರಬಂದಿವೆ.
ಪೈರಸಿಯನ್ನು ತಡೆಗಟ್ಟಲು ಗೂಂಡಾ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಲು ಕನ್ನಡ ಚಿತ್ರೋದ್ಯಮ ಸರಕಾರವನ್ನು ಆಗ್ರಹಿಸುತ್ತಿದೆ. ಆದರೆ ಸರಕಾರ ಮಾತ್ರ ಜಾಣ ಮೌನವನ್ನು ಅನುಸರಿಸುತ್ತಿದ್ದು ಗೂಂಡಾ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಲು ವಿಫಲವಾಗಿದೆ. ಆದರೆ ಆನಂದ್ ಆಡಿಯೋ ಸಂಸ್ಥೆ ಪೈರಸಿ ತಡೆಗಟ್ಟಲು ತಂತ್ರಜ್ಞಾನ ಬೇಲಿಯ ಮೊರೆಹೊಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)