ಅಂಬರೀಶ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

ಪ್ರಶಸ್ತಿ ಸ್ವೀಕರಿಸಿದ ನಂತರ ಅಂಬರೀಶ್ ಮಾತನಾಡುತ್ತಾ, ''ಆಂಧ್ರ ಸರಕಾರ ನೀಡಿದ ಈ ಪ್ರಶಸ್ತಿ ಗೆ ನಾನು ಆಭಾರಿ ಆಗಿದ್ದೇನೆ. ನನ್ನ ಮಡದಿ ಕೂಡ ತೆಲುಗಿನವರಾಗಿದ್ದು ಕನ್ನಡ ಮತ್ತು ತೆಲುಗುಚಿತ್ರರಂಗದ ನಂಟು ಬಹಳ ಹಿಂದಿನದು'' ಎಂದು ಸಂಪೂರ್ಣ ತೆಲುಗಿನಲ್ಲಿ ಮಾತನಾಡಿದರು.
ಜೀವಮಾನ ಶ್ರೇಷ್ಠ ಸಾಧನೆಗಾಗಿ ನೀಡುವ ಈ ಪ್ರಶಸ್ತಿಯನ್ನು 2003,2004,2005 ಮತ್ತು 2006 ರ ಸಾಲಿಗೆ ಕ್ರಮವಾಗಿ ತೆಲುಗು ನಟ ಕೃಷ್ಣ, ಖ್ಯಾತ ಸಂಗೀತ ಸಂಯೋಜಕ ಇಳಯರಾಜ, ಕನ್ನಡ ನಟ ಅಂಬರೀಶ್ ಮತ್ತು ಹಿಂದಿ ನಟಿ ವಹೀದಾ ರೆಹಮಾನ್ ಗೆ ನೀಡಲಾಯಿತು.
ಬಹಳ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್ ಮಯವಾಗಿತ್ತು. ತೆಲುಗು ಚಿತ್ರರಂಗಕ್ಕೆ ನೀಡಿದ ಪ್ರಶಸ್ತಿ ಕೂಡ ಕಾಂಗ್ರೆಸ್ ಬೆಂಬಲಿಸುವ ಕಲಾವಿದರಿಗೆ ನೀಡಲಾಗಿದೆ ಎಂಬ ಅಪಸ್ವರವೂ ಕೇಳಿಬಂದಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications