ನಟ ದರ್ಶನ್ ವಿಜಯಯಾತ್ರೆಗೆ ಬಿತ್ತು ಭರ್ಜರಿ ಬ್ರೇಕ್

Darshan
ನಟ ದರ್ಶನ್ ವಿಜಯಯಾತ್ರೆಗೆ ಆರಂಭದಲ್ಲೇ ವಿಘ್ನವೊಂದು ಎದುರಾಗಿದೆ. ಪತ್ನಿ ಮೇಲೆ ಹಲ್ಲೆ ನಡೆಸಿರುವ ದರ್ಶನ್ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ರಾಜ್ಯಾದ್ಯಂತ ಅವರು ಕೈಗೊಳ್ಳಲಿರುವ ವಿಜಯಯಾತ್ರೆಯನ್ನು ತಡೆಯಬೇಕು ಎಂದು ಪೊಲೀಸರಿಗೆ ಬೆಂಗಳೂರಿನ ವಕೀಲರೊಬ್ಬರು ಪತ್ರ ಬರೆದಿದ್ದಾರೆ.

ಶೇಷಾದ್ರಿಪುರಂನ ವಕೀಲ ಆರ್ ಎಲ್ ಎನ್ ಮೂರ್ತಿ ಅವರು ತಮ್ಮ ಪತ್ರವನ್ನು ಹೋಂ ಸೆಕ್ರೇಟರಿ, ಡಿಜಿಪಿ ಹಾಗೂ ನಗರ ಪೊಲೀಸ್ ಕಮೀಷನರ್ ಅವರಿಗೆ ಕಳುಹಿಸಿದ್ದಾರೆ. ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವ ನಟ ದರ್ಶನ್ ಅವರ ರೋಡ್ ಶೋಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

"ದರ್ಶನ್ ಅವರನ್ನು ಬಂಧಿಸಿದಾಗ ಅವರ ಅಭಿಮಾನಿಗಳು ವಿಜಯನಗರ ಪೊಲೀಸ್ ಠಾಣೆ ಮುಂದೆ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಇದನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ನಲ್ಲಿ ನಡೆಯುತ್ತಿರುವ ಅವರ ಕೇಸ್ ವಿಚಾರಣೆ ಮುಗಿಯುವವರೆಗೂ ಅವಕಾಶ ನೀಡಬಾರದು" ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ದರ್ಶನ್ ವಿಜಯಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ಸಮಾಜಕ್ಕೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದಿದ್ದಾರೆ ಮೂರ್ತಿ. ಪತ್ರ ನಮ್ಮ ಕೈಸೇರಿದೆ. ಆದರೆ ಅದರಲ್ಲಿನ ವಿವರಗಳು ಇನ್ನಷ್ಟೆ ತಿಳಿದುಕೊಳ್ಳಬೇಕಾಗಿದೆ. ಆ ಬಳಿಕವಷ್ಟೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ನಗರ ಪೊಲೀಸ್ ಕಮೀಷನರ್ ಬಿ ಜಿ ಜ್ಯೋತಿಪ್ರಕಾಶ್ ಮಿರ್ಜಿ. (ಏಜೆನ್ಸೀಸ್)

More from Filmibeat

English summary
Kannada actor Darshan Vijay Yathra facing trouble. Bangalore based advocate RLN Murthy has sent letters to the home secretary, the DGP and the city police commissioner, asking them not to permit Darshan to take part in the road show as he is under investigation in a criminal case. ನಟ ದರ್ಶನ್ ವಿಜಯಯಾತ್ರೆಗೆ ಬೀಳಲಿದೆ ಬ್ರೇಕ್!
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X