Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂದಿಬೆಟ್ಟದಲ್ಲಿ ಧೂದ್ ಪೇಡ ದಿಗಂತ್ ಪುತ್ರ ಗೀತೆ
ಧೂದ್ ಪೇಡ ದಿಗಂತ್ ಮತ್ತು ರೂಪಶ್ರೀ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಪುತ್ರ. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ನಂದಿಬೆಟ್ಟದಲ್ಲಿ ಚಿತ್ರೀಕರಿಸಲಾಯಿತು. ರಾಂನಾರಾಯಣ್ ರಚನೆಯ 'ಕಾಲೇಜು ಜನರೇಶನ್ ಯಾರ ಮಾತು ಕೇಳಲ್ಲಾ ಹಾರ್ಟ್ನಲ್ಲಿ ವೈಬ್ರೇಶನ್ ಎಂದಿಗೂ ಮುಗಿಯಲ್ಲಾ ಎಂಬ ಹಾಡಿಗೆ ರಾಜಾ ನೃತ್ಯ ನಿರ್ದೇಶನದಲ್ಲಿ ದಿಗಂತ್ ಹಾಗೂ ರೂಪಶ್ರೀ ಹೆಜ್ಜೆ ಹಾಕಿದರು.
ಈ ಗೀತೆಯ ಚಿತ್ರೀಕರಣದೊಂದಿಗೆ 'ಪುತ್ರ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ದೇಶಕ ಉಮಾಕಾಂತ್ ತಿಳಿಸಿದ್ದಾರೆ. ರೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಂಥೋಣಿಪಾಲ್ ಆವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಟಿ.ಸತ್ಯನಾರಾಯಣರ ಸಹ ನಿರ್ಮಾಣವಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಮೇಲುಕೋಟೆ, ನಂದಿಬೆಟ್ಟ ಹಾಗೂ ಚಿಕ್ಕಮಗಳೂರಿನಲ್ಲಿ ಒಟ್ಟು ನಲವತ್ತೈದು ದಿನಗಳ ಕಾಲ ನಡೆದಿದೆ. ಸದ್ಯದಲ್ಲೆ ಮಾತಿನ ಜೋಡಣೆ ಆರಂಭವಾಗಲಿದೆ.
ಆರು ಹಾಡುಗಳಿರುವ ಈ ಚಿತ್ರಕ್ಕೆ ರಮೇಶ್ರಾಜಾ ಸಂಗೀತ ನೀಡಿದ್ದಾರೆ. ರವಿಸುವರ್ಣ ಛಾಯಾಗ್ರಹಣ, ಬಾಬುಖಾನ್ ಕಲಾನಿರ್ದೇಶನ, ಚಂದ್ರಮಯೂರ್ ಹಾಗೂ ರಾಜಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ಹಾಗೂ ರಾಮಣ್ಣನವರ ನಿರ್ಮಾಣ ನಿರ್ವಹಣೆಯಿದೆ. ದಿಗಂತ್, ಸುಪ್ರೀತಾ, ರೂಪಶ್ರೀ, ಅವಿನಾಶ್, ಟೆನ್ನಿಸ್ಕೃಷ್ಣ, ಸುಧಾಬೆಳವಾಡಿ, ಸುಂದರರಾಜ್ ತಾರಾಬಳಗ ಚಿತ್ರಕ್ಕಿದೆ.