Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ
ಸಾಕಷ್ಟು ದಿನಗಳ ಗ್ಯಾಪ್ನ ನಂತರ ನಿರ್ದೇಶಕ ಸೂರಿ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಜಂಗ್ಲಿ' ಅಂಥ. ಇದೇನಿದು ಒಳ್ಳೆ ಹಿಂದಿ ಚಿತ್ರದ ಟೈಟಲ್ ತರಹ ಇದೆ ಎಂದುಕೊಳ್ಳುವವರಿಗೆ ಸೂರಿ ಮತ್ತೊಂದು ಶಾಕ್ ನೀಡಿದ್ದಾರೆ. 'ದುನಿಯಾ' ಚಿತ್ರದ ನಟ ವಿಜಯ್ ಹಾಗೂ ಛಾಯಾಗ್ರಾಹಕ ಸತ್ಯ ಹೆಗ್ಡೆಯನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಲಿದೆ. ಜಂಗ್ಲಿ ಚಿತ್ರಕ್ಕಾಗಿ ಸೂರಿ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ.
'ಇಂತಿ ನಿನ್ನ ಪ್ರೀತಿಯ' ಸೋಲಿನಿಂದ ಕಂಗೆಟ್ಟಿರುವ ಸೂರಿ ಹಾಗೂ 'ಚಂಡ', 'ಯುಗ' ಚಿತ್ರಗಳಿಂದ ಹೈರಾಣಾಗಿರುವ ವಿಜಯ್ ಬ್ರೇಕ್ಗಾಗಿ ಕಾಯುತ್ತಿದ್ದರು. ಯಾವುದಕ್ಕೂ ಕಾಲ ಕೂಡಿ ಬರಬೇಕು. ವಿಜಯ್ ನಟಿಸಿದ 'ಮುಖ್ಯಮಂತ್ರಿ ಐ ಲವ್ ಯು', 'ಪುಟ್ಟ' ಹಾಗೂ 'ಸ್ಲಂ ಬಾಲ' ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಸೂರಿಯ 'ಜಂಗ್ಲಿ' ಚಿತ್ರವನ್ನು ಹೊರತುಪಡಿಸಿದರೆ ವಿಜಯ್ ಕೈಯಲ್ಲಿ ಯಾವುದೇ ಚಿತ್ರ ಇಲ್ಲ.ಇನ್ನು ಛಾಯಾಗ್ರಾಹಕ ಸತ್ಯ ಹೆಗ್ಡೆ 'ಅಂಬಾರಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 25 ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಸೂರಿ ಚಿತ್ರತಂಡವನ್ನು ಸೇರಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮ್ಯಾ ಜೋಡಿಯ 'ಬೊಂಬಾಟ್' ಚಿತ್ರದ ಚಿತ್ರೀಕರಣ ಮುಗಿದಿದೆ. ಅದರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಖುಷಿಯಾಗಿದ್ದಾರೆ. ಇದಾದ ಅವರು ನಂತರ 'ಜಂಗ್ಲಿ'ಚಿತ್ರದ ಕಡೆ ಗಮನ ಹರಿಸಲಿದ್ದಾರೆ. ಈ ಮಧ್ಯೆ ರಾಕ್ಲೈನ್ ವೆಂಕಟೇಶ್, ಸುದೀಪ್ ಹಾಗೂ ದೊಡ್ಡಣ್ಣ ನಟನೆಯ 'ಕಾಮಣ್ಣನ ಮಕ್ಕಳು' ಜೂನ್.20ರಂದು ತೆರೆಕಾಣಲಿದೆ. ನಿರ್ದೇಶಕ ಸೂರಿ ಈ ಬಾರಿ ಎಡವದಂತೆ ಜಾಗ್ರತೆವಹಿಸಿದ್ದಾರೆ. ಪಕ್ಕಾ ಚಿತ್ರಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಟೈಟಲ್ಗೆ ಹೊಂದುವ ನಟನನ್ನು ಹುಡುಕಿದ್ದಾರೆ. ಕ್ಯಾಮೆರಾ ಹಿಂದೆ ಸತ್ಯ ಹೆಗ್ಡೆ ಇದ್ದಾರೆ. ಇವರೆಲ್ಲರ ಬೆನ್ನಿಗೆ ರಾಕ್ಲೈನ್ ವೆಂಕಟೇಶ್ ಇದ್ದಾರೆ. ದುನಿಯಾ ದಿನಗಳು ಮತ್ತೆ ಮರುಕಳಿಸುತ್ತವಾ? ಕಾಲಾಯ ತಸ್ಮೈ ನಮಃ!
(ದಟ್ಸ್ಕನ್ನಡ ಸಿನಿವಾರ್ತೆ)