ಮಹಾಶಿವರಾತ್ರಿಗೆ ಶಿವರಾಜ್ ಕುಮಾರ್ ಶಿವ ಸಾಕ್ಷಾತ್ಕಾರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಯಂಗ್ ಅಂಡ್ ಸ್ಟೈಲಿಶ್ ತೋರಿಸಲಿರುವ ಚಿತ್ರ 'ಶಿವ'. ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರ 2012ರ ಮಹಾಶಿವರಾತ್ರಿಗೆ ತೆರೆಕಾಣಲಿದೆ. 'ಶಿವ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ರಾಕ್ಲೈನ್ ಸ್ಟುಡಿಯೋದಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿದೆ.
ಪಕ್ಕಾ ಮಾಸ್ ಮಸಾಲಾ ನಿರ್ದೇಶಕ ಎಂದೇ ಖ್ಯಾತರಾದ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ನಾಯಕಿ ಗ್ಲಾಮರ್ ಗೊಂಬೆ ರಾಗಿಣಿ. ಈಗಾಗಲೆ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಬಗ್ಗೆ ಓಂ ಮಾತನಾಡುತ್ತಾ, ಬೆಗ್ಗರ್ಸ್ ಮಾಫಿಯಾಗೆ ಬಲಿಯಾದ ಓರ್ವ ಭಿಕ್ಷುಕ ಹಾಗೂ ಮಗುವೊಂದನ್ನು ಶಿವಣ್ಣ ರಕ್ಷಿಸುತ್ತಾರೆ.
ಆರುನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಫಳನಿ ರಾಜ್ ಅವರ ನಿರ್ದೇಶನದಲ್ಲಿ ಈ ಸನ್ನಿವೇಶ ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರದ ಎರಡು ಹಾಡುಗಳನ್ನು ಆಸ್ಟ್ರೇಲಿಯಾ ಹಾಗೂ ಯೂರೋಪ್ನಲ್ಲಿ ಚಿತ್ರೀಕರಿಸಲಾಗುತ್ತದೆ. ಪ್ರಮುಖ ಸನ್ನಿವೇಶಗಳನ್ನು ಬೆಂಗಳೂರಿನ ರೇಸ್ಕೋರ್ಸ್ನಲ್ಲಿ ಚಿತ್ರೀಕರಿಸಲಾಗುವುದು ಎಂದು ನಿರ್ಮಾಪಕ ಶ್ರೀಕಾಂತ್ ತಿಳಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











