Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸೆ ತೋಡಿಕೊಂಡ ಮೀಸೆ ಚಿಗುರಿದ ನಾಯಕ!
*ಜಯಂತಿ
ತೇಜಸ್ ಸುಮ್ಮನೆ ಅವಕಾಶ ಕೇಳುತ್ತಿಲ್ಲ. ಅವರ ಬಯೋಡೇಟಾ ಭರ್ಜರಿಯಾಗಿದೆ. ತಮಿಳಿನ 'ಕಾದಲಕ್ಕು ಮರಣಂ ಇಲ್ಲೈ" ಚಿತ್ರದಲ್ಲಿವರು ನಾಯಕ. ಈ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ತೇಜಸ್ ಬಿಡುವಿನ ಸಮಯದಲ್ಲಿ ಗಾಂಧಿನಗರದಲ್ಲಿ ಪತ್ರಕರ್ತರ ಮುಂದೆ ನಿಂತಿದ್ದರು. ಅಂದಹಾಗೆ, 'ಕಾದಲಕ್ಕು ಮರಣಂ ಇಲ್ಲೈ" ಚಿತ್ರದ ನಿರ್ಮಾಪಕ ಕುಂಜಮೋನ್!
ಕುಂಜಮೋನ್ ಗೊತ್ತಲ್ಲ? ಅವರದ್ದು 'ಜಂಟಲ್ಮನ್" ಖ್ಯಾತಿ. 'ಕಾದಲನ್", 'ಕಾದಲ್ ದೇಸಂ" ಅವರ ನಿರ್ಮಾಣದ ಮತ್ತೆರಡು ಯಶಸ್ವಿ ಚಿತ್ರಗಳು. ಈ ಹಿಟ್ ನಿರ್ಮಾಪಕನಿಗೆ ಯಾರ ಮೂಲಕವೋ ತೇಜಸ್ ಫೋಟೊ ದೊರೆತಿದೆ. ಅದೃಷ್ಟ ಕೈಬೀಸಿ ಕರೆದಿದೆ. ಭಾರತೀರಾಜ, ಶಂಕರ್, ಸುರೇಶ್ ಕೃಷ್ಣ ಅವರ ಸಹಾಯಕರಾಗಿ ಕೆಲಸ ಮಾಡಿದ ಬಾಲಾಜಿ 'ಕಾದಲಕ್ಕು ಮರಣಂ ಇಲ್ಲೈ" ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನನ್ನ ಮುಂದಿನ ಚಿತ್ರಕ್ಕೂ ನೀನೇ ಹೀರೊ ಎಂದು ಕುಂಜಮೋನ್ ಬೆನ್ನುತಟ್ಟಿದ್ದಾರೆ. ಈ ನಡುವೆ ಮತ್ತೊಂದು ತಮಿಳು ಚಿತ್ರವೂ ತೇಜಸ್ರನ್ನು ಕೈಬೀಸಿ ಕರೆದಿದೆ. ಆದರೆ, ತೇಜಸ್ ಮನ ಕನ್ನಡದತ್ತಲೇ ತುಡಿಯುತ್ತಿದೆ.
ಕನ್ನಡದಲ್ಲಿ ಅವಕಾಶ ಬೇಕು ಎನ್ನೋದು ಈ ಹುಡುಗನ ಹಂಬಲ. ಹೂಂ ಎನ್ನು ಗಾಂಧಿನಗರವೇ...