Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರ ನಿರ್ಮಿಸಬೇಕಾ? ‘ವೈದೀಪ್ಸ್ ಐಎನ್ಸಿ.’ ಸಂಪರ್ಕಿಸಿ
- ಸಿನಿಡೆಸ್ಕ್, ದಟ್ಸ್ಕನ್ನಡ
ಹಾಡುಗಾರ ರಾಮ್ಪ್ರಸಾದ್ ಗಾಂಧಿನಗರಕ್ಕೆ ನಾಗತಿಹಳ್ಳಿ ಪರಿಚಯಿಸಿದ ಮತ್ತೊಂದು ಪ್ರತಿಭೆ. ರಾಮ್ಪ್ರಸಾದ್ ಎಂದಕೂಡಲೆ ತಕ್ಷಣ ನೆನಪಿಗೆ ಬರುವುದು ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಮೂಡಲ್ ಕುಣಿಗಲ್ ಕೆರೆ ಹಾಡು. ಹಾಡು ಹಳೆಯದಾಯಿತು, ಹೊಸದೇನು ರಾಮ್ಪ್ರಸಾದ್ ಎಂದರೆ ಅವರು ಕನಸುಗಳ ಗುಚ್ಛವನ್ನೇ ಮುಂದಿಡುತ್ತಾರೆ. ಆ ಮಟ್ಟಿಗೆ ರಾಮ್ಪ್ರಸಾದ್ ಕನ್ನಡ ಚಿತ್ರರಂಗದ ಕನಸುಗಾರ, ನಂ.2. ಸದ್ಯಕ್ಕೆ ನಾವು ಹೇಳಹೊರಟಿರುವುದು ರಾಮ್ಪ್ರಸಾದ್ ಯೋಜನೆಗಳ ಕಥನವನ್ನು.
ಗೆಳೆಯರೊಂದಿಗೆ ಸೇರಿಕೊಂಡು, ಕೋಡ್ಲು ರಾಮಕೃಷ್ಣ ನಿದೇಶನದಲ್ಲಿ ‘ಮಿಸ್ ಕ್ಯಾಲಿಫೋರ್ನಿಯ’ ಎನ್ನುವ ಚಿತ್ರದ ನಿರ್ಮಾಣದಲ್ಲಿ ರಾಮ್ ತೊಡಗಿರುವುದು ದಟ್ಸ್ಕನ್ನಡ ಓದುಗರಿಗೆ ಗೊತ್ತು . ಈ ಚಿತ್ರಕ್ಕೆ ನಾಯಕಿಯನ್ನು ಹುಡುಕುವ ಪ್ರಕಟಣೆ ದಟ್ಸ್ಕನ್ನಡದಲ್ಲಿ ಪ್ರಕಟವಾಗಿತ್ತು . ಆಮೇಲೆ?
ಮಿಸ್ ಕ್ಯಾಲಿಫೋರ್ನಿಯಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ತೊಡಗಿಕೊಂಡಿರುವಾಗಲೇ ರಾಮ್ ಮನಸ್ಸಿನಲ್ಲಿ ಇನ್ನಷ್ಟು ಯೋಜನೆಗಳು ಹರಿದಾಡುತ್ತಿವೆ. ಅವುಗಳಲ್ಲಿ ಮುಖ್ಯವಾದುದು ಕನ್ನಡ ಚಿತ್ರಗಳಲ್ಲಿ ಅಮೆರಿಕನ್ನಡಿಗರು ಬಂಡವಾಳ ತೊಡಗಿಸಲು ಅವಕಾಶ ಮಾಡಿಕೊಡುವುದು.
ಅನೇಕ ಅಮೆರಿಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ಆದರೆ ದಾರಿ ಗೊತ್ತಿಲ್ಲ . ಅಲ್ಲದೆ ತೊಡಗಿಸಿದ ಹಣ ಅಪವ್ಯಯವಾದರೆ? ಆದರೆ ಅಮೆರಿಕದ ಪೌರತ್ವವನ್ನು ಹೊಂದಿರುವ ಹಾಗೂ ಬೆಂಗಳೂರಿನಲ್ಲೂ ನೆಲೆ ಹೊಂದಿರುವ ವ್ಯಕ್ತಿಯಾಬ್ಬ ವ್ಯವಹಾರಗಳನ್ನು ನೇರವಾಗಿ ನೋಡಿಕೊಳ್ಳುವಂತಾದರೆ ಹಣ ಹೂಡುವುದು ಸಲೀಸು, ಅಲ್ಲವೇ? ಈ ಹಿನ್ನೆಲೆಯಲ್ಲಿ ರಾಮ್ಪ್ರಸಾದ್ ‘ವೈದೀಪ್ಸ್ ಐಎನ್ಸಿ.’ ಎನ್ನುವ ಸಂಸ್ಥೆ ಪ್ರಾರಂಭಿಸಿದ್ದಾರೆ. ರಾಮ್ ಮಕ್ಕಳಾದ ವೈಭವ ಹಾಗೂ ದೀಪಿಕಾ ಹೆಸರಿನಲ್ಲಿ ‘ವೈದೀಪ್ಸ್ ಐಎನ್ಸಿ.’ ರೂಪುಗೊಂಡಿದೆ. ಈ ಸಂಸ್ಥೆಯ ಉದ್ದೇಶ ಅಮೆರಿಕನ್ನಡಿಗರು ಹಾಗೂ ಕನ್ನಡ ಚಿತ್ರೋದ್ಯಮದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವುದು.
‘ವೈದೀಪ್ಸ್ ಐಎನ್ಸಿ.’ ಅಮೆರಿಕಾದಲ್ಲಿ ನೋಂದಾಯಿತವಾಗಿರುವ ಸಂಸ್ಥೆ . ಹಾಗಾಗಿ ಹಣ ಹೂಡುವುದು ಹಾಗೂ ಇತರ ಲೆಕ್ಕಾಚಾರಗಳು ಸಂಪೂರ್ಣ ಪಾರದರ್ಶಕವಾಗಿರುತ್ತವೆ. ತೆರಿಗೆ ಹಾಗೂ ಇನ್ನಿತರ ವ್ಯವಹಾರಗಳೂ ಸುಲಭ. ಆಸಕ್ತ ಅನಿವಾಸಿ ಭಾರತೀಯರು ತಮ್ಮ ಹಣವನ್ನು ಈ ಸಂಸ್ಥೆಯ ಮೂಲಕ ಚಿತ್ರೋದ್ಯಮದಲ್ಲಿ ನೇರವಾಗಿ ತೊಡಗಿಸಬಹುದಾಗಿದೆ. ಚಿತ್ರಗಳನ್ನು ನಿರ್ಮಿಸಬಹುದಾಗಿದೆ.
‘ವೈದೀಪ್ಸ್ ಐಎನ್ಸಿ.’ಯ ಮೊದಲ ಯೋಜನೆಯಾಗಿ ಈಗಾಗಲೇ ಚಿತ್ರವೊಂದರ ನಕಾಶೆ ಸಿದ್ಧವಾಗಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಕಾರ್ ಕಾರ್ ಖ್ಯಾತಿಯ ಮನೋಮೂರ್ತಿ ಸಂಗೀತ ನೀಡುವರು. ಚಿತ್ರದ ಬಗೆಗಿನ ಪೂರ್ಣ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.
ಅಂದಹಾಗೆ, ರಾಮ್ಪ್ರಸಾದ್-ಇಂದ್ರಜಿತ್ ಜೋಡಿಯ ಹೊಸ ಚಿತ್ರಕ್ಕೆ ಎನ್ಆರ್ಐ ನಾಯಕಿ ಬೇಕಾಗಿದ್ದಾಳೆ. 18-20 ವಯೋಮಾನದ ಯುವತಿಯರು ಅವಕಾಶಕ್ಕಾಗಿ ಸಂಪರ್ಕಿಸಬಹುದು. ಆಸಕ್ತರು ವಿವಿಧ ಭಂಗಿಗಳಲ್ಲಿನ ಭಾವಚಿತ್ರಗಳು, ಸ್ವವಿವರ, ತರಬೇತಿಯ ವಿವರಗಳನ್ನು ಕಳಹಿಸಬಹುದು. ಪೋಷಕರ ಅನುಮತಿ ಅಗತ್ಯ. ಚಿತ್ರಕ್ಕೆ ಆಯ್ಕೆಯಾಗುವ ನಾಯಕಿ ಚಿತ್ರೀಕರಣಕ್ಕಾಗಿ ಭಾರತಕ್ಕೆ 20 ದಿನಗಳ ಮಟ್ಟಿಗೆ ಬರಬೇಕಾಗುವುದು. ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ರಾಮ್ಪ್ರಸಾದ್ರ
ಸಂಪರ್ಕ
ವಿಳಾಸ
:
ಇಮೇಲ್-
[email protected].
ದೂರವಾಣಿ-
08026614325.
ಸೆಲ್-20122636.
ಮುಖಪುಟ / ಸ್ಯಾಂಡಲ್ವುಡ್