twitter
    For Quick Alerts
    ALLOW NOTIFICATIONS  
    For Daily Alerts

    ರಿಮೇಕ್‌ ಚಿತ್ರಗಳತ್ತ ಪಾರ್ವತಮ್ಮ ಒಲವು, ಸಾಹಿತಿಗಳ ಟೀಕೆ

    By Staff
    |

    ಬೆಂಗಳೂರು : ರಿಮೇಕ್‌ ಚಿತ್ರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವ ವಿಚಾರ, ಮತ್ತೊಂದು ಸುತ್ತಿನ ಚರ್ಚೆಗೆ ದಾರಿ ಮಾಡಿದೆ.

    ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಾರ್ತಾಸಚಿವ ಬಿ.ಶಿವರಾಂ ಅಧ್ಯಕ್ಷತೆಯಲ್ಲಿ , ನಗರದ ಬಾದಾಮಿ ಹೌಸ್‌ನಲ್ಲಿ ಸಭೆ ನಡೆಯಿತು. ಈ ವಿಚಾರದಲ್ಲಿ ಸಭೆಯಲ್ಲಿ ಏಕಾಭಿಪ್ರಾಯ ಮೂಡಲಿಲ್ಲ. ಸಭೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಸಾಹಿತಿಗಳು ಪಾಲ್ಗೊಂಡಿದ್ದರು.

    ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಮಾತನಾಡಿ, ಕನ್ನಡದಲ್ಲಿ ಒಳ್ಳೆ ಕಥೆಗಳ ಕೊರತೆಯಿದೆ. ಹೀಗಾಗಿ ರಿಮೇಕ್‌ ಮಾಡುವುದು ತಪ್ಪೇನಲ್ಲ. ಈ ಚಿತ್ರಗಳಿಗೂ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಬೇಕು. ರಿಮೇಕ್‌ ಚಿತ್ರಗಳಿಂದ ಸಂಸ್ಕೃತಿ ಹಾಳಾಗುವುದಿಲ್ಲ ಎಂದರು.

    ಪಾರ್ವತಮ್ಮ ಅವರ ವಾದಕ್ಕೆ ನಿರ್ಮಾಪಕ ಸಾ.ರಾ.ಗೋವಿಂದ್‌, ರಾಕ್‌ಲೈನ್‌ ವೆಂಕಟೇಶ್‌, ಸಂದೇಶ್‌ ನಾಗರಾಜ್‌ ಧ್ವನಿಗೂಡಿಸಿದರು.

    ರಿಮೇಕ್‌ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುವ ವಾದಕ್ಕೆ ನಿರ್ದೇಶಕ ಗಿರೀಶ್‌ ಕಾಸರವಳಳಿ, ಡಾ.ಚಂದ್ರಶೇಖರ ಕಂಬಾರ, ಎಂ.ಎಸ್‌.ಸತ್ಯ, ಟಿ.ಎಸ್‌.ನಾಗಾಭರಣ, ಬರಗೂರು ರಾಮಚಂದ್ರಪ್ಪ, ಯು.ಆರ್‌.ಅನಂತಮೂರ್ತಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.

    ಸಹಮತ : ಚಿತ್ರನಗರಿ ನಿರ್ಮಾಣ, ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರದ ಅಭಿವೃದ್ಧಿ ಮತ್ತಿತರ ವಿಚಾರಗಳಿಗೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

    ರಿಮೇಕ್‌ ಚಿತ್ರಗಳ ಬಗೆಗೆ ನಿಮ್ಮ ಒಲವು ನಿಲುವು ನಮಗೆ ಬರೆಯಿರಿ

    (ಇನ್ಫೋ ವಾರ್ತೆ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 19:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X