Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಮಗಳೂರು ಹುಡುಗಿಯಿಂದ ಪ್ರೇಮ್ಗೆ ಆತ್ಮಹತ್ಯೆ ಬೆದರಿಕೆ!
ಚಿಕ್ಕಮಗಳೂರಿನ ಹುಡುಗಿ ಪ್ರೇಮ್ಗೆ ಗಂಟು ಬಿದ್ದಿದ್ದು, ‘ತಾಳಿ ಕೊಡು, ಅಥವಾ ನೇಣಿನ ಹಗ್ಗ ಕೊಡು’ ಎಂದು ಕಾಡುತ್ತಿದ್ದಾಳೆ! ಅಷ್ಟು ಮಾತ್ರವಲ್ಲ, ‘ರಕ್ಷಿತಾಳನ್ನು ಮದುವೆಯಾದರೆ ನಾನು ಸುಮ್ಮನಿರುವುದಿಲ್ಲ. ನಿಮ್ಮ ಮದುವೆ ಕಲ್ಯಾಣ ಮಂಟಪದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಪ್ರೇಮಬೆದರಿಕೆ ಹಾಕಿದ್ದಾಳಂತೆ.
‘ಅಮ್ಮಾ ತಾಯಿ, ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡು’ ಎಂಬ ಪ್ರೇಮ್ ಮನವಿಗೆ, ಚಿಕ್ಕಮಗಳೂರಿನ ಸೂಜಿ ಮಲ್ಲಿಗೆ ಕಿಲುಬು ಕಾಸಿನ ಕಿಮ್ಮತ್ತು ನೀಡಿಲ್ಲವಂತೆ!
ಕರಿಯ, ಎಕ್ಸ್ಕ್ಯೂಸ್ ಮಿ, ಜೋಗಿ ಚಿತ್ರಗಳು ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದೇ ತಡ, ಪ್ರೇಮ್ಗೆ ತಾರಾಪಟ್ಟ ಕಾಲಬದಿಗೆ ಬಂತು. ತುಂಡುತುಂಡು ಹುಡುಗಿಯರ ಮನದಲ್ಲಿ ಪ್ರೇಮರಾಗ ಶುರುವಾಯಿತು. ಆಗಲಿಂದಲೂ ಪ್ರೇಮಿಗಳ ಕಾಟ ಪ್ರೇಮ್ಗೆ ತಪ್ಪಿಲ್ಲವಂತೆ.
ಫೋನ್ನಲ್ಲಿ ಪ್ರೀತಿ ಮಾಡು, ನನ್ನ ಮದ್ವೆಯಾಗು ಅನ್ನೋ ಹುಡುಗಿಯರಿಗೆ, ಪ್ರೇಮ್ ಸಮಾಧಾನ ಹೇಳಿದ್ದರಂತೆ. ಬುದ್ದಿ ಹೇಳಿದ್ದರಂತೆ. ಕೆಲವರನ್ನು ಗದರಿಸಿಯೂ ಇದ್ದರಂತೆ. ಈಗಲೂ ಗದರಿಸುತ್ತಿದ್ದಾರಂತೆ. ರಕ್ತದಿಂದ ಹುಡುಗಿಯರು ಬರೆದ ಪ್ರೇಮ ಪತ್ರಗಳೂ ಅವರ ಬಳಿ ಇವೆಯಂತೆ. ಎಲ್ಲವೂ ಪ್ರೇಮಮಯ!
ರಕ್ಷಿತಾ ಮದುವೆ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾದ ದಿನದಿಂದಲೂ, ಇಂತಹ ಕರೆಗಳು ಮತ್ತಷ್ಟು ಹೆಚ್ಚಿವೆ ಅನ್ನೋದು ಪ್ರೇಮ್ ಅಭಿಪ್ರಾಯ. ಅವರ ಅಭಿಪ್ರಾಯ ಏನೇ ಇರಲಿ, ನೀವೇನಂತಿರಾ ರಕ್ಷಿತಾ?
ಇದನ್ನೂ ಓದಿ :
ನಾನೀಗ ನಾಯಕ - ಪ್ರೇಮ್
ರಕ್ಷಿತಾಗೆ ಬಿಳಿ ಗಂಡ ಬೇಕಂತೆ!?
ಕೊನೆಗೂ ನೆರವೇರಿದ ರಕ್ಷಿತಾ-ಪ್ರೇಮ್ ನಿಶ್ಚಿತಾರ್ಥ
ಮುಖಪುಟ / ಸ್ಯಾಂಡಲ್ವುಡ್