Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಖ್ಯಾತ ಸಿನಿಮಾ ಛಾಯಾಗ್ರಾಹಕ ಆರ್.ಮಧುಸೂದನ್ ನಿಧನ
'ಭಕ್ತ ಕನಕದಾಸ"ದಿಂದ ಹಿಡಿದು 'ಶಾಂತಿಕ್ರಾಂತಿ"ವರೆಗೆ ತಮ್ಮ ಕೆಮೆರಾ ಕಣ್ಣಿನಿಂದ ಸಿನಿಮಾಭಿಮಾನಿಗಳ ಮನಗೆದ್ದ ಆರ್.ಮಧುಸೂದನ್ ಗುರುವಾರ ರಾತ್ರಿ ಚೆನ್ನೈನಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ, ಮಗಳು ಮತ್ತು ಅಪಾರ ಸಿನಿಮಾ ಸ್ನೇಹಿತರನ್ನು ಮಧುಸೂದನ್ ಅಗಲಿದ್ದಾರೆ.
ರಾಷ್ಟ್ರ ಮಟ್ಟದ ಛಾಯಾಗ್ರಹಣಕಾರರಾದ ಎಸ್.ಡಿ.ಲಾಲ್ ಮತ್ತು ದ್ವಾರಕಾ ದ್ವಿವೇಜ ಜೊತೆ ಕೆಲಸ ಮಾಡಿದ ಅಪರೂಪದ ಪ್ರತಿಭೆ ಮಧುಸೂದನ್ ತಣ್ಣಗಿನ ಮನುಷ್ಯ. ಸರಳ ಜೀವಿ ಎಂದೇ ಹೆಸರುವಾಸಿ. ಒಂದು ಪೊಸಿಷನ್ನಲ್ಲಿ ಕೆಮೆರಾ ಕಣ್ಣನ್ನು ನೆಟ್ಟರೆ ಮುಗಿಯಿತು, ಇಡೀ ಶಾಟ್ ಮುಗಿಯುವವರೆಗೆ ಆ ಕೆಮೆರಾ ಕದಲಕೂಡದು. ಅದು ಮಧುಸೂದನ್ ಕೆಲಸದ ವೈಶಿಷ್ಟ್ಯ.
ಕನ್ನಡ ಚಿತ್ರ ನಿರ್ದೇಶಕ ವೈ.ಆರ್.ಸ್ವಾಮಿಯವರ ತಮ್ಮನಾದ ಮಧುಸೂದನ್ ಛಾಯಾಗ್ರಹಣದ ವೃತ್ತಿ ಶುರುವಾದದ್ದು ಭಕ್ತ ಕನಕದಾಸ ಚಿತ್ರದ ಮೂಲಕ, 1960ರಲ್ಲಿ. ತಮ್ಮ ಅನನ್ಯ ಕೆಲಸದಿಂದಲೇ ಛಾಪು ಮೂಡಿಸಿದ ಇವರನ್ನು ಹುಡುಕಿಕೊಂಡು ಬಂದವರು ಹುಣಸೂರು ಕೃಷ್ಣಮೂರ್ತಿ. ತಮ್ಮ ರತ್ನಮಂಜರಿ ಚಿತ್ರದಲ್ಲಿ ಹುಣಸೂರು ಮಧುಸೂದನ್ಗೆ ಅವಕಾಶ ಕೊಟ್ಟರು. ಆಮೇಲೆ ತೆರೆ ಕಂಡ ಸ್ವರ್ಣ ಗೌರಿ ಹೆಸರು ತಂದುಕೊಟ್ಟಿತು.
ಹಾಸ್ಯನಟ ರತ್ನಾಕರ್ ಜೊತೆ ಸೇರಿ ಮಧುಸೂದನ್ ಶನಿ ಪ್ರಭಾವ ಎಂಬ ಚಿತ್ರವನ್ನೂ ಮಾಡಿದರು. ಶಂಕರ್ ಗುರು, ನಾನು ನನ್ನ ಹೆಂಡ್ತಿ, ಹಾವಿನ ಹೆಡೆ, ನೀ ನನ್ನ ಗೆಲ್ಲಲಾರೆ, ಅದೇ ಕಣ್ಣು, ಪ್ರೇಮಲೋಕ, ರಣಧೀರ, ಶಾಂತಿಕ್ರಾಂತಿ ಮಧುಸೂದನ್ ಕೆಲಸ ಮಾಡಿದ ಕೆಲವು ಚಿತ್ರಗಳು. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಸುಮಾರು 100 ಚಿತ್ರಗಳಲ್ಲಿ ಮಧುಸೂದನ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರರಂಗದ ಅನೇಕ ನಟ- ನಟಿಯರು ಮಧುಸೂದನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.(ಇನ್ಫೋ ವಾರ್ತೆ)