Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಮುಕ್ತ’: ಸೀತಾರಾಂರ ಹೊಸ ಧಾರಾವಾಹಿ
- ದಟ್ಸ್ಕನ್ನಡ ಬ್ಯೂರೋ
‘ಮ’ಕಾರಾದಿ ಹೆಸರು ಸೀತಾರಾಂಗೆ ಒಲಿದಿರುವುದಂತೂ ಅಕ್ಷರಶಃ ನಿಜ. ಹಾಗೆಯೇ ಸೀತಾರಾಂ ನಮ್ಮ ಜೀವನದ ನಡುವೆಯೇ ನಡೆವ ತೀರಾ ಸಹಜ ಘಟನೆಗಳನ್ನೂ ಹೊಸತೆನ್ನಿಸುವಂತೆ ತೆರೆಗೆ ತರಬಲ್ಲ ನಿಸ್ಸೀಮ. ಜೊತೆಜೊತೆಗೆ ನಮ್ಮದೇ ಸಮಸ್ಯೆಗಳಿಗೆ ಕನ್ನಡಿ. ಅದಕ್ಕೆ ಪರಿಹಾರದ ಭರವಸೆಯ ಮುನ್ನುಡಿ. ಇದು ಸೀತಾರಾಂ ಗಾರುಡಿ.
‘ಮನ್ವಂತರ’ದ ನಂತರ ತಣ್ಣಗಾಗಿದ್ದ ಸೀತಾರಾಂ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಆದರೆ ಅವರ ಮನಸ್ಸಲ್ಲಿ ಹರಿದಾಡುತ್ತಿದ್ದುದು ಡಬ್ಲ್ಯುಟಿಓ ನಿರ್ಧಾರಗಳಿಂದ ರೈತರಿಗಾಗುತ್ತಿರುವ ಅನ್ಯಾಯದ ಮಜಲು, ರಾಜಕಾರಣಿಗಳ ದಾಂಗುಡಿಗೆ ಮಣಿದು ಪ್ರಾಮಾಣಿಕತೆಯನ್ನು ಪಕ್ಕಕ್ಕಿರಿಸುವ ಅನಿವಾರ್ಯತೆಯಲ್ಲಿ ಬೇಯುವವರ ತೊಳಲಾಟ. ‘ಮುಕ್ತ’ ಧಾರಾವಾಹಿ ಈ ಸಮಸ್ಯೆಗಳನ್ನೇ ಗರ್ಭದಲ್ಲಿಟ್ಟುಕೊಂಡಿದೆ. ಸಮಸ್ಯೆಗಳನ್ನು ಇನ್ನಷ್ಟು ಗಾಢವಾಗಿಸುವ ಜಾತೀಯತೆಯ ಉಪ್ಪು, ಪ್ರೀತಿಯ ವಗ್ಗರಣೆ ಹಾಕಲಾಗಿದೆ. ಒಟ್ಟಿನಲ್ಲಿ ‘ಮುಕ್ತ’ ಧಾರಾವಾಹಿ ಧರ್ಮ ಹಾಗೂ ರಾಜಕೀಯ ಸುಳಿಗಳಲ್ಲಿ ಸಿಲುಕಿ ನಲುಗುವ ಮನಸ್ಸುಗಳ ಸುತ್ತ ಹೆಣೆದ ಬಲೆಯಂತಿದೆ.
ಕಳೆದ ವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಮುಕ್ತ’ ಧಾರಾವಾಹಿ ಶೂಟಿಂಗ್ಗೆ ಟೇಕಾಫ್. ಮೊದಲ ಶಾಟ್ ನೋಡಿ ಮಾತಾಡೋಕೆ ಆಜಾದಿ ಬಚಾವೋ ಆಂದೋಲನದ ರಾಜೀವ್ ದೀಕ್ಷಿತ್ ಬಂದಿದ್ದರು. ಕನ್ನಡದಲ್ಲಿ ಅಂಕಿ- ಅಂಶಗಳ ಹೇಳುತ್ತಾ ಹಿಂದಿಯಲ್ಲಿ ರೈತ ಕಳಕಳಿಯ ಮಾತಾಡಿದ ರಾಜೀವ್, ಕಾರು ಸಾಲಕ್ಕೆ 9 ಪ್ರತಿಶತ ಬಡ್ಡಿ ಹಾಕುವ ಬ್ಯಾಂಕುಗಳು ರೈತರಿಗೆ ಕೊಡುವ ಟ್ರ್ಯಾಕ್ಟರ್ಗೆ 17 ಪ್ರತಿಶತ ಸಾಲ ಹಾಕುವ ಸಾಮಾಜಿಕ ಅನ್ಯಾಯವನ್ನು ಬಿಚ್ಚಿಟ್ಟು, ಚಪ್ಪಾಳೆ ಗಿಟ್ಟಿಸಿಕೊಂಡರು. ರಾಜೀವ್ ದೀಕ್ಷಿತ್ ಅವರನ್ನು ಗಾಂಧಿ ಎಂದು ಸೀತಾರಾಂ ಹೇಳಿದ್ದು ಉತ್ಪ್ರೇಕ್ಷೆಯಾಯಿತೇನೋ. ಧಾರಾವಾಹಿಯ ಪಾತ್ರಧಾರಿಯೂ ಆದ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ದುಂಡುಮುಖದ ತುಂಬ ನಗೆ ತುಂಬಿಕೊಂಡು ನಿಂತಿದ್ದರು.
‘ಮನ್ವಂತರ’ ಧಾರಾವಾಹಿಯ ಪಾತ್ರದಲ್ಲಿ ವಿದೇಶಕ್ಕೆ ಹಾರುವ ಮೂಲಕ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಮಾಳವಿಕಾ ಈ ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿಣಿಯಾಗಿ ನಟಿಸುತ್ತಿರುವುದು ವಿಶೇಷ. ಸೀತಾರಾಂ ಮೆಚ್ಚಿನ ನಟ ಸೇತುರಾಂ, ದಿವ್ಯಾ ರಘುರಾಮ್, ರಮೇಶ್ಕುಮಾರ್, ದತ್ತಣ್ಣ, ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಪ್ರಭು, ಸುಂದರಶ್ರೀ, ಶ್ರೀನಾಥ್ ವಸಿಷ್ಠ ಮೊದಲಾದವರ ತಾರಾ ಬಳಗವಿದೆ. ಸಂಗೀತ ಸಿ.ಅಶ್ವಥ್. ಛಾಯಾಗ್ರಹಣ ರಾಜೇಂದ್ರ ಸಿಂಗ್. ನಿರ್ದೇಶನದ ಜೊತೆಗೆ ಕಥೆ- ಸಂಭಾಷಣೆಯ ಜವಾಬ್ದಾರಿಯನ್ನೂ ಸೇತುರಾಂ ಹೊತ್ತುಕೊಂಡಿದ್ದಾರೆ.
ಇನ್ನೊಂದೆರಡು ವರ್ಷ ಸೀತಾರಾಂ ಬ್ಯುಸಿ- ‘ಮುಕ್ತ’ಗೆ ಪೂರ್ಣ ಮುಕ್ತಿ ಸಿಗುವವರೆಗೆ !
ಮುಖಪುಟ / ಸ್ಯಾಂಡಲ್ವುಡ್