Don't Miss!
- News Lok Sabha election 2024: ಟಿಡಿಪಿ ಅಭ್ಯರ್ಥಿ 5,785 ಕೋಟಿ ಒಡೆಯ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ಭದ್ರ"ಕೋಟೆಯಲ್ಲಿ ಮುರಳಿ ಮೀಟ್ಸ್ ಮೀರಾ!
ಒಬ್ಬ ನಾಯಕನ ಒಂದು ಚಿತ್ರ ಒಂದು ಹಂತಕ್ಕೆ ಓಕೆ ಆಗುವುದೇ ತಡ, ಆ ಹೀರೋ ಹಿಂದೆ ಮುಂದಿನ ಚಿತ್ರಗಳು ಆದಷ್ಟು ಬೇಗ ತೆರೆಗೆ ಬರಲು ಯತ್ನಿಸುತ್ತವೆ ಎನ್ನುವುದಕ್ಕೆ ತಾಜಾ ಉದಾಹರಣೆ ಪ್ರಜ್ವಲ್ ದೇವರಾಜ್.ಅವರ ಕೋಟೆ ಸಿನಿಮಾ ತೆರೆಕಂಡಿದ್ದೇ ತಡ, ಮುರಳಿ ಮೀಟ್ಸ್ ಮೀರಾ ಮತ್ತು ಭದ್ರ ಚಿತ್ರತಂಡ ಸಿಕ್ಕಾಪಟ್ಟೆ ಚುರುಕಾಗಿಬಿಟ್ಟಿವೆ.
ಮುರಳಿ... ಚಿತ್ರದ ನಿರ್ಮಾಪಕ ಯೋಗೀಶ್ ಹುಣಸೂರು ಫುಲ್ಖುಷ್ ಆಗಿದ್ದಾರೆ. ಆದಷ್ಟು ಬೇಗ ಚಿತ್ರಕ್ಕೆ ಒಂದು ಗತಿ ಕಾಣಿಸಿಬಿಟ್ಟರೆ "ಕೋಟೆ" ಬಿಸಿಯಲ್ಲೇ ಜನ ತಮ್ಮ ಚಿತ್ರವನ್ನೂ ನೋಡಿಬಿಡುತ್ತಾರೆ ಎನ್ನುವುದು ಅವರ ಅಲಿಖಿತ ನಂಬಿಕೆ. ಅದೇ ರೀತಿ ಇನ್ನೊಂದು ಕಡೆ ನಿರ್ಮಾಪಕ ಎಂ.ಎನ್.ಕುಮಾರ್ 'ಭದ್ರ' ಚಿತ್ರವನ್ನು 'ಕೋಟೆ' ಚಿತ್ರಮಂದಿರದಿಂದ "ಟೇಕಾಫ್" ಆಗುವ ಮುನ್ನವೇ ತೆರೆಕಾಣಿಸುವ ತರಾತುರಿಯಲ್ಲಿ ಮಾತಿನ ಜೋಡಣೆಯ ಕೆಲಸದಲ್ಲಿ ಮುಂದಾಗಿದ್ದಾರೆ.
ಆದರೆ, ಪ್ರಜ್ವಲ್ಗಿಂತ ಒಂದು ಕೈ ಹಿಂದೆ ನಿಂತಿರುವ ಲೂಸ್ ಮಾದ ಯೋಗೀಶನ ಒಂದಷ್ಟು ಚಿತ್ರಗಳು ತೆರೆಕಾಣದೇ ಡಬ್ಬದಲ್ಲೇ ಕೂತಿವೆ. ಒಬ್ಬರು 'ದೇವದಾಸ್' ಚಿತ್ರ ಮೊದಲು ಬರಲಿ ಎಂದು ಕೈ ಕಟ್ಟಿ ಕೂತಿದ್ದಾರೆ. ಇನ್ನೊಬ್ಬರು 'ಧೂಳ್' ಬಂದುಹೋಗಲಿ ಎಂದು ಸುಮ್ಮನಿದ್ದಾರೆ. ಹೀಗಾಗಲು "ರಾವಣ"ನ "ಯಕ್ಷ"ಗಿರಿಯೇ ಕಾರಣ. 'ದೇವದಾಸ್' ನಿರ್ಮಾಪಕ ಎಬಿಸಿಡಿ ಶಾಂತಕುಮಾರ್ ಸಿನಿಮಾ ಹೊರಹಾಕಲು ಹೆದರಿ ಬೆವರುತ್ತಿದ್ದಾರೆ!