ಕಥೆ, ಚಿತ್ರಕಥೆ ಮತ್ತು ಸಂಭಾಷಣೆ-ಉಪೇಂದ್ರ

ಕೆ.ಸಾಗರ್ ಮತ್ತು ಕೆವಿ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶೀರ್ಷಿಕೆ ಇನ್ನು ಇಟ್ಟಿಲ್ಲ. ಸಜ್ಜನ್ ರಾವ್ ವೃತ್ತದ ಶ್ರೀ ಸುಬ್ರಮಣ್ಯೇಶ್ವರ ದೇವಾಲಯದಲ್ಲಿ ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಉಪೇಂದ್ರ ಚಿತ್ರಕಥೆ ಎಂದರೆ ಹೊಸತನ, ಭಾವನೆಗಳ ತುಯ್ದಾಟ, ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಸಂಭಾಷಣೆಗಳು ನೆನಪಾಗುತ್ತವೆ. ಈ ಜೀವಂತಿಕೆಯನ್ನೇ ಪ್ರೇಕ್ಷಕರೂ ನಿರೀಕ್ಷಿಸುತ್ತಾರೆ.
ತೆಲುಗಿನ ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂಪತ್ ನಂದಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜಾನಿ ಲಾಲ್ ಛಾಯಾಗ್ರಹಣ ಮತ್ತು ಗುರು ಕಿರಣ್ ಸಂಗೀತ ಈ ಚಿತ್ರಕ್ಕಿದೆ. ಹೆಚ್ ಟುಓ ಚಿತ್ರದ ನಂತರ ಉಪೇಂದ್ರ ಯಾಕೋ ಏನೋ ಚಿತ್ರಕಥೆ, ಸಂಭಾಷಣೆ ಬರೆಯುವುದನ್ನು ಮರೆತೆ ಬಿಟ್ಟಿದ್ದರು. ಅಂದಹಾಗೆ ಈ ಚಿತ್ರಕ್ಕೆ ಉಪೇಂದ್ರ ಅವರೆ ನಾಯಕ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications