Don't Miss!
- Finance ಎರಡು ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ, 144 ಸೆಕ್ಷನ್ ಜಾರಿ, ದಿನಾಂಕ ವಿವರ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- News ₹8 Lakh Gold: ಆಟೋದಲ್ಲೇ ಬಿಟ್ಟಿದ್ದ 8 ಲಕ್ಷ ರೂ. ಚಿನ್ನಾಭರಣವಿದ್ದ ಬ್ಯಾಗ್ ಮರಳಿ ಸಿಕ್ಕಿದ್ದೆ ರೋಚಕ
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Automobiles ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಈಗ ಮಾಸ್ಟರ್ ಅಲ್ಲ ಸ್ಕೂಲ್ ಮಾಸ್ಟರ್
50ವರ್ಷಗಳ ಹಿಂದೆ ಬಿ.ಆರ್.ಪಂತುಲು 'ಸ್ಕೂಲ್ಮಾಸ್ಟರ್ ಚಿತ್ರವನ್ನು ನಿರ್ಮಿಸಿದ್ದು ಎಲ್ಲರಿಗೂ ತಿಳಿದ ಸಂಗತಿ. ವಿಶಿಷ್ಟ ಕತೆಯೊಂದಿಗೆ ಸುಮಧುರ ಹಾಡುಗಳನ್ನೊಳಗೊಂಡ ಚಿತ್ರವದು. ಅರ್ಧ ಶತಕದಾಚೆ ನಿರ್ಮಾಣವಾಗಿದ್ದ ಚಿತ್ರದ ಶೀರ್ಷಿಕೆಯನ್ನು ನಮ್ಮ ಚಿತ್ರಕ್ಕೆ ಪುನಃ ಬಳಸಿಕೊಂಡಿರುವುದು ನಮಗೆ ಸಂತಸ ತಂದಿದೆ ಎಂದು ನಿರ್ಮಾಪಕರು ತಿಳಿಸಿದರೆ ಆ ಸ್ಕೂಲ್ಮಾಸ್ಟರ್ ಕತೆಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ. ನಮ್ಮ ಚಿತ್ರಕತೆಯೇ ವಿಭಿನ್ನ ಎನ್ನುತ್ತಾರೆ ನಿರ್ದೇಶಕ ದಿನೇಶ್ಬಾಬು.
ಸ್ಕೂಲ್ ಮಾಸ್ಟರ್ ಚಿತ್ರದ ಕಥೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹಿಂದಿಯಲ್ಲಿ ಅಮಿತಾಬ್, ಹೇಮಮಾಲಿನಿ, ಸಲ್ಮಾನ್ ಖಾನ್ ಅಭಿನಯದಲ್ಲಿ 'ಭಾಗ್ ಬಾನ್' ಚಿತ್ರ ಮಾಡಲಾಯಿತು. ನಂತರ ಈ ಚಿತ್ರವನ್ನು ಇಟ್ಟುಕೊಂಡು ಕನ್ನಡದಲ್ಲಿ ವಿಜಯಲಕ್ಷ್ಮಿ ಸಿಂಗ್ ಅವರು 'ಈ ಬಂಧನ' ಎಂಬ ಚಿತ್ರಮಾಡಿದರು.
ಹಿಂದೆ ಒರಟ ಐ ಲವ್ ಯು ಚಿತ್ರವನ್ನು ನಿರ್ಮಿಸಿದ್ದ ಸಿ.ಮನೋಹರ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ. ಛಾಯಾಗ್ರಹಣ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ.ಜ್ಞಾನೇಶ್ ಸಂಕಲನ, ಚಿನ್ನಿಪ್ರಕಾಶ್ ನೃತ್ಯ, ಪಳನಿರಾಜ್, ರವಿವರ್ಮ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ವಿಜಯಕುಮಾರ್, ಚಂಪಕಧಾಮ ಬಾಬು ಅವರ ನಿರ್ಮಾಣ ನಿರ್ವಹಣೆ 'ಮಾಸ್ಟರ್'ಗಿದೆ. ಡಾ.ವಿಷ್ಣುವರ್ಧನ್, ಸುಹಾಸಿನಿ ಅವರ ಅನುಪಮಜೋಡಿ, 'ಮಾತಾಡ್ ಮಾತಾಡು ಮಲ್ಲಿಗೆ'ಚಿತ್ರದ ನಂತರ ಮತ್ತೆ ಒಂದಾಗಿದೆ. ಉಳಿದ ತಾರಾಬಳಗದಲ್ಲಿ ದೇವರಾಜ್, ಅವಿನಾಶ್, ಚಿತ್ರಾಶೆಣೈ, ಮುಖೇಶ್ರಿಷಿ, ಬೇಬಿ ಬೃಂದಾ, ಬೇಬಿ ಪ್ರೇರಣಾ ಮುಂತಾದವರಿದ್ದಾರೆ.