Don't Miss!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?
*ಜಯಂತಿ
ಚೇತನ್ ಅಮೆರಿಕದಲ್ಲಿ ಓದಿಕೊಂಡ, ಓಡಾಡಿಕೊಂಡಿದ್ದ ಹುಡುಗ. ಲೋಕ ಸುತ್ತಿದ್ದಕ್ಕೆ ಈ ಗಾಂಭೀರ್ಯವಾ? ವಿಪರೀತ ಓದು ನಗುವನ್ನು ಕಸಿದುಕೊಂಡಿತಾ? ಇವು ಉಪ ಪ್ರಶ್ನೆಗಳು.ಆ ದಿನಗಳು ಹಾಗೂ ಬಿರುಗಾಳಿ ಚಿತ್ರದ ಸುದ್ದಿಗೋಷ್ಠಿಗಳಲ್ಲೂ ಚೇತನ್ ತೀರಾ ಗಂಭೀರವಾಗಿ ಕಾಣಿಸಿಕೊಂಡಿದ್ದರು. ನಾಯಕರ ಚೆಲ್ಲುತನವಾಗಲೀ, ಪೆದ್ದುತನವಾಗಲೀ ಅವರ ನಡೆನುಡಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂಥ ನಡವಳಿಕೆ ಅಪರೂಪ. ಅವರ ಮಾತುಗಳನ್ನು ಕೇಳುತ್ತಿದ್ದರೆ ಕೆಲವೊಮ್ಮೆ ವಿಷ್ಣುವರ್ಧನ್ ನೆನಪಾಗುವುದಂಟು. ಆದರೆ, ವಿಷ್ಣು ವೇದಾಂತ ಹರೆಯದ ಹುಡುಗನಿಗೆ ಬೇಕಾ?
ಮಾತು ಮರೆತವರಂತೆ ಕಂಡ ಚೇತನರನ್ನು ಮತ್ತೆ ಕೆಣಕಿದೆವು ಏಕಿಷ್ಟು ಗಂಭೀರ? ಇಲ್ಲಪ್ಪ ಎಂದರು ಚೇತನ್. ನನಗೆ ಈವರೆಗೆ ಯಾರೂ ಈ ರೀತಿ ಕೇಳಿಲ್ಲ ಎಂದರು. ಅಂದಹಾಗೆ, ಚೇತನ್ರ ಮುಂದಿನ ಚಿತ್ರದ ಹೆಸರು ಸೂರ್ಯಕಾಂತಿ. ಆ ದಿನಗಳು ನಿರ್ದೇಶಿಸಿದ್ದ ಚೈತನ್ಯ ಸೂರ್ಯಕಾಂತಿಯ ಸಾರಥ್ಯ ವಹಿಸಿದ್ದಾರೆ. ಸೂರ್ಯನತ್ತ ಹೊರಳುತ್ತಲೇ ನಗುವ ಹೂವು ಸೂರ್ಯಕಾಂತಿ. ಆ ನಗೆಕಾಂತಿ ಹೂಸಂಗದಲ್ಲಿ ಚೇತನ್ಗೂ ಕೊಂಚ ಸಿದ್ಧಿಸಲಿ.
ಪೂರಕ
ಓದಿಗೆ
ಬಿರುಗಾಳಿ:
ಗಾಳಿಯಲ್ಲೊಂದು
ಹೊಸ
ಗೋಪುರ
ಆ
ದಿನಗಳು
ಚೇತನ್
ರ
ಬಿರುಗಾಳಿ
ಟ್ರೈಲರ್