Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ. ವಿಷ್ಣು ಹುಟ್ಟುಹಬ್ಬ: ಸಂಭ್ರಮಕ್ಕೆ ಸರ್ಕಾರದ ತಣ್ಣೀರು!
ಎರಡು ವರ್ಷಗಳ ಹಿಂದೆ ಖ್ಯಾತ ನಟ ವಿಷ್ಣುವರ್ಧನ ತೀರಿಕೊಂಡಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಂದಿನ ಶಾಸಕ ಎಸ್.ಎ. ರಾಮದಾಸ್ ಮೈಸೂರಿನಲ್ಲಿ ಡಾ. ರಾಜ್ ಹಾಗೂ ಡಾ. ವಿಷ್ಣು ಹೆಸರಿನಲ್ಲಿ ಜಂಟಿಯಾಗಿ ಚಿತ್ರನಗರಿ ಸ್ಥಾಪಿಸುವುದಾಗಿ ಸರ್ಕಾರದ ಪರ ಘೋಷಣೆ ಮಾಡಿದ್ದರು. ಆದರೆ, ಎರಡು ವರ್ಷ ಕಳೆದರೂ ಅದನ್ನು ಮಾಡದೇ ಸರ್ಕಾರ ದ್ರೋಹವೆಸಗಿದೆ ಎಂದು ವಿಷ್ಣು ಜನ್ಮದಿನದಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.
ಡಾ. ರಾಜ್ ಹಾಗೂ ಡಾ. ವಿಷ್ಣು ಇಬ್ಬರೂ ಅವಿಭಜಿತ ಮೈಸೂರು ಜಿಲ್ಲೆಗೇ ಸೇರಿದವರು. ಜೊತೆಗೆ ಖ್ಯಾತ ನಟ ಅಂಬರೀಷ್ ಹಾಗೂ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಕೂಡ ಅದೇ ಜಿಲ್ಲೆಗೆ ಸೇರಿದವರು. ಹಾಗಾಗಿ ಈ ಗಣ್ಯರೆಲ್ಲರ ಸಂತಸ, ಬೆಂಬಲ ಈ ಸರ್ಕಾರದ ಆ ಘೋಷಣೆಯ ಪರವಾಗಿತ್ತು. ಆದರೆ ಸರ್ಕಾರದ ಈ ವಿಳಂಬ ನೀತಿ ಎಲ್ಲರ ಕೋಪಕ್ಕೂ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಈಗ ಮಾತು ತಪ್ಪಿದ ಮಗ ಎನ್ನಿಸಿಕೊಳ್ಳುವಂತಾಗಿದೆ. ಧರ್ಮಸ್ಥಳದ ಮಂಜುನಾಥನಿಗೇ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಯಡಿಯೂರಪ್ಪನಿಗೆ ಇದ್ಯಾವ ಮಹಾ ಎಂದು ಅವರನ್ನು ಬಲ್ಲ ಎಲ್ಲರೂ ಒಳಗೊಳಗೆ ನಗುತ್ತಿದ್ದಾರೆ.