Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದ್ವಾರ್ಕಿಗೆ ಗೆಟ್ ಔಟ್ ಎಂದಿದ್ದರು ಸಿದ್ಧಲಿಂಗಯ್ಯ
*ಜಯಂತಿ
ತನ್ನ ಸಾಮರ್ಥ್ಯದ ಬಗ್ಗೆ ಹಾಗೂ ನಿರ್ದೇಶಕನ ಸ್ವಾತಂತ್ರ್ಯದ ಬಗ್ಗೆ ಸಿದ್ಧಲಿಂಗಯ್ಯನವರಿಗೆ ವಿಪರೀತ ವಿಶ್ವಾಸ, ಅಭಿಮಾನ. ಮುತ್ತಣ್ಣ ಚಿತ್ರದ ಶೂಟಿಂಗ್ ನಡೀತಿತ್ತು. ಒಂದು ದೃಶ್ಯ ನಿರ್ದೇಶಕರಿಗೆ ಸಮಾಧಾನ ತರಲಿಲ್ಲ. ಚೆನ್ನಾಗಿಯೇ ಬಂದಿದೆ, ಷಾಟ್ ಓಕೆ ಮಾಡ್ಬಿಡಿ ಸಾರ್ ಎಂದ್ರು ದ್ವಾರಕೀಶ್. ಅವರು ನಿರ್ಮಾಪಕರು. ಖರ್ಚಾಗುತ್ತಿರುವ ರೀಲಿನ ಕುರಿತ ಭಯ ಅವರದ್ದು. ದ್ವಾರ್ಕಿ ಮಾತು ಕೇಳುತ್ತಿದ್ದಂತೆಯೇ ಸಿದ್ಧಲಿಂಗಯ್ಯ ಕೆಂಡಾಮಂಡಲ. ಗೆಟ್ಔಟ್ ಎಂದು ಚೀರಿದರು. ದ್ವಾರ್ಕಿಗೆ ಆಶ್ಚರ್ಯ. ಆದರೆ ಮರುಮಾತಾಡದೆ ಸ್ಥಳದಿಂದ ಅವರು ಹೊರನಡೆದರು. ಚಿತ್ರೀಕರಣ ಮುಂದುವರೆಯಿತು.
ನಂತರದ್ದೆಲ್ಲ ಇತಿಹಾಸ. ಮೇಯರ್ ಮುತ್ತಣ್ಣ ಸೂಪರ್ ಹಿಟ್. ಮೊದಲ ಪ್ರದರ್ಶನದ ನಂತರ ಸಿದ್ಧಲಿಂಗಯ್ಯನವರನ್ನು ಅಪ್ಪಿಕೊಂಡ ದ್ವಾರಕೀಶ್, ಅದ್ಭುತ ಸಿನಿಮಾ ಮಾಡಿದ್ದೀರಿ ಎಂದು ಕಣ್ಣೀರಾದರಂತೆ. ಅಂದಹಾಗೆ, ಮುತ್ತಣ್ಣನಿಗೆ ಖರ್ಚಾದ ದುಡ್ಡು 2 ಲಕ್ಷ 10 ಸಾವಿರ ರೂಪಾಯಿ.
ಮತ್ತೊಂದು ಪ್ರಸಂಗ. ಬಂಗಾರದ ಮನುಷ್ಯ ಚಿತ್ರಕ್ಕೆ ಸಂಬಂಧಿಸಿದ್ದು. ಸಿನಿಮಾ ತೆರೆಕಂಡ ಮೊದಲ ದಿನ ಪ್ರೇಕ್ಷಕರ ಪ್ರತಿಕ್ರಿಯೆ ಅಷ್ಟು ಚೆನ್ನಾಗಿರಲಿಲ್ಲ. ರಾಜಕುಮಾರ್ ಸಿನಿಮಾ ಹೌಸ್ಫುಲ್ ಆಗಲಿಲ್ಲ ಅಂದ್ರೆ ಏನರ್ಥ?. ಈ ಸಿದ್ಧಲಿಂಗಯ್ಯ ನಿರ್ಮಾಪಕ ಕೆಸಿಎನ್ ಗೌಡರನ್ನು ಮುಳುಗಿಸಿಬಿಟ್ಟ ಎಂದು ಗಾಂಧಿನಗರದ ಜನ ಮಾತನಾಡಿಕೊಂಡರು. ಗೌಡರಿಗೂ ಆತಂಕ. ಇದೇನು ಸ್ವಾಮಿ ಅಂದರು. ಆಗ ಸಿದ್ಧಲಿಂಗಯ್ಯ ಹೇಳಿದ್ದು
ಅರವತ್ತು ದಿನ ಶೂಟಿಂಗ್ ಮಾಡಿದ್ದೀವಿ. ಒಂದು ದಿನದ ಶೂಟಿಂಗ್ ಖರ್ಚನ್ನು ಸಿನಿಮಾ ತೆರೆಕಂಡ ನಂತರದ ಒಂದು ದಿನದಲ್ಲಿ ನಿರೀಕ್ಷಿಸೋದು ಲೆಕ್ಕಾಚಾರ. ಅದುಬಿಟ್ಟು, ಅಷ್ಟೂ ದಿನಗಳ ಖರ್ಚು ಮೊದಲ ದಿನವೇ ಬರಬೇಕು ಎಂದರೆ ಹೇಗೆ? ಸ್ವಲ್ಪ ತಾಳ್ಮೆಯಿಂದಿರಿ...ಸಿದ್ಧಲಿಂಗಯ್ಯನವರ ಲೆಕ್ಕ ತಪ್ಪಲಿಲ್ಲ. ಎರಡನೇ ದಿನದಿಂದಲೇ ಬಂಗಾರದ ಮನುಷ್ಯನಿಗೆ ಜನ ಮುಗಿಬಿದ್ದರು. ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಸಿನಿಮಾ ದಾಖಲೆ ಪ್ರದರ್ಶನ ಕಂಡಿತು.
ಕಳೆದ ವಾರ, ಟೀವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ಧಲಿಂಗಯ್ಯ ಮೇಲಿನ ಎರಡು ಘಟನೆಗಳನ್ನು ನೆನಪಿಸಿಕೊಂಡು ಆರ್ದ್ರರಾದರು. ಕಳೆದ ಎಪ್ಪತ್ತೈದು ವರ್ಷಗಳನ್ನು ಕೆಣಕಿದರೆ ಇಂಥ ಅಮೃತ ಕ್ಷಣಗಳು ನೂರಾರು ಸಿಗುತ್ತವೆ. ಇಂಥ ಕ್ಷಣಗಳೇ ಅಲ್ಲವೇ ಸಂಸ್ಕೃತಿಯನ್ನು ರೂಪಿಸುವುದು!
ಪೂರಕ
ಓದಿಗೆ
ಎಪ್ಪತ್ತೈದರ
ಯೌವನದಲ್ಲಿ
ಕನ್ನಡ
ಚಿತ್ರರಂಗ
ಕನ್ನಡ
ಸಿನಿಮಾ
75ಕ್ಕೆ
75ಪುಸ್ತಕ:
ಜಯಮಾಲಾ
ನಾಯಕ
ನಟರಿಗೆ
ದ್ವಾರಕೀಶ್
ಛೀಮಾರಿ