Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಯಾಮ್ ಸ್ಸಾರಿ ತಮಿಳು ರಿಮೇಕ್ ಗೆ ಮಾಧವನ್
ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಒಳ್ಳೆ ಕಾಂಟ್ಯಾಕ್ಟ್ ಹೊಂದಿರುವ ರವೀಂದ್ರ ಮೊದಲ ಎಂಟ್ರಿ ಕನ್ನಡದಲ್ಲೇ ಮಾಡ್ತೀನಿ ಎಂದು ನಿರ್ಮಿಸಿದ ಚಿತ್ರ ಗೋತಾ ಹೊಡೆದಿದ್ದು ನೋಡಿ ಪ್ರೇಕ್ಷಕರಿಗಷ್ಟೇ ಅಲ್ಲ ಸ್ವತಃ ನಿರ್ದೇಶಕ ರವೀಂದ್ರ ಕೂಡಾ ಬೇಜಾರಾಗಿಬಿಟ್ಟಿತ್ತು. ಐಯಾಮ್ ಸ್ಸಾರಿ, ಥೇಟರ್ ನಿಂದ ಚಿತ್ರ ತೆಗೆದುಬಿಡು ಎಂದು ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ದರು.
ಈಗ ಹ್ಯಾಂಗೋವರ್ ನಿಂದ ಹೊರ ಬಂದು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ತಮಿಳಿಗೆ ರಿಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಸುಂದರ ನಟ ಆರ್ ಮಾಧವನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದಲ್ಲದೆ ಪಾರ್ಥಿಬನ್ ಕೂಡಾ ನಟಿಸುತ್ತಿದ್ದಾರಂತೆ.
ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಐಯಾಮ್ ಸ್ಸಾರಿ ಚಿತ್ರ ಮೂರು ದಿನದ ಮೇಲೆ ಚಿತ್ರಮಂದಿರದಲ್ಲಿ ಉಳಿಯಲಿಲ್ಲ. ಆದರೂ ಯಾವ ಧೈರ್ಯದ ಮೇಲೆ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಪ್ರೇಮ್ ಗೆ ಒಂದು ಒಳ್ಳೆ ಹಿಟ್ ಚಿತ್ರ ನೀಡಲಾಗಲಿಲ್ಲವಲ್ಲ ಎಂಬ ಕೊರಗಿನಿಂದ ರವೀಂದ್ರ ಹೊರಬಂದಿದ್ದಾರೆ.
ಪ್ರೇಮ್ ಕುಮಾರ್ ಅವರ ಮುಂದಿನ ಚಿತ್ರ 'ಕೆಟ್ಟವನು' ನಿರ್ದೇಶಿಸಲು ತಮ್ಮ ಅಸಿಸ್ಟೆಂಟ್ ಪ್ರಿಯಾ ಬೆಳ್ಳಿಯಪ್ಪ ಅವರನ್ನು ಕಳಿಸಿದ್ದಾರೆ. ಏನಾದರೂ ರವೀಂದ್ರ ಸಾಹಸ ಹಾಗೂ ಸಹನೆಯನ್ನು ಮೆಚ್ಚಬೇಕು.