Don't Miss!
- Automobiles ಭಾರತದಲ್ಲಿ ಎಪ್ರಿಲಿಯಾ ಶ್ರೇಣಿಯ ನವೀಕರಣ... ಸೂಪರ್ ಬೈಕ್ ಸಂಸ್ಕೃತಿಗೆ ಅಡಿಪಾಯ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Lifestyle ಸಲ್ಮಾನ್ ಹತ್ಯೆಗೆ ಪದೇ ಪದೇ ಯತ್ನ ಆಗುತ್ತಿರೋದೇಕೆ..? ಬಿಷ್ಣೋಯ್ ಗ್ಯಾಂಗ್ ದಶಕಗಳ ವೈರತ್ವವೇನು?
- News ಕಾಂಗ್ರೆಸ್ ಬಿಗ್ ಶಾಕ್ : ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರ್ಪಡೆ
- Finance BBMP: ಬೆಂಗಳೂರಿನಲ್ಲಿ 138 ಕಿಮೀ ರಸ್ತೆ ನಿರ್ಮಾಣ, 5 ಕಂಪೆನಿಗಳಿಂದ ಟೆಂಡರ್
- Technology ಇದೇ ಏಪ್ರಿಲ್ 22 ರಂದು ರಿಯಲ್ಮಿ ಈ ಹೊಸ ಫೋನ್ ಸೇಲ್ ಪ್ರಾರಂಭ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ, ಪೂಜಾಗಾಂಧಿ
'ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ ಬುಧವಾರ(ಜ.18) ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಇಂದು ಜೆಡಿಎಸ್ ಪಕ್ಷದ ಶಾಲು ಸ್ವೀಕರಿಸಿ, ಪಕ್ಷದ ಬಾವುಟ ಬೀಸಿ ಸದಸ್ಯತ್ವ ಪತ್ರಕ್ಕೆ ಸಹಿ ಹಾಕಿದರು.
ಬಳಿಕ ಪೂಜಾಗಾಂಧಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ರಾಜಕೀಯ ಪ್ರವೇಶಕ್ಕೆ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರೇ ಸ್ಫೂರ್ತಿ. ನನಗೆ ಪಕ್ಷದ ಸದಸ್ಯತ್ವ ನೀಡಿದ್ದಕ್ಕೆ ಧನ್ಯವಾದಗಳು. ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುತ್ತೇನೆ ಕಂಗ್ಲಿಷ್ನಲ್ಲಿ ಹೇಳಿದರು.
"ನನಗೆ ಅಧಿಕಾರದ ಆಸೆ ಇಲ್ಲ. ಯಾವುದೇ ಕಾರಣಕ್ಕೂ ಚುನಾವಣಾ ಕಣಕ್ಕಿಳಿಯುವುದಿಲ್ಲ. ಈಗಾಗಲೆ ಎಚ್ಐವಿ,ಏಡ್ಸ್ ಬಾಧಿತರರಿಗೆ ನನ್ನಿಂದಾದ ಸೇವೆ ಸಲ್ಲಿಸುತ್ತಿದ್ದೇನೆ. ಈಗ ರಾಜಕೀಯಕ್ಕೆ ಸೇರಿರುವ ಕಾರಣ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ" ಎಂದು ಪೂಜಾಗಾಂಧಿ ಅಭಿಪ್ರಾಯಪಟ್ಟರು.
ಆದರೆ ಈ ಸಂದರ್ಭದಲ್ಲಿ ಕಾರಣಾಂತರಗಳಿಂದ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಅನುಪಸ್ಥಿತರಿದ್ದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿರೆಡ್ಡಿ ಹಾಗೂ ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪೂಜಾ ಗಾಂಧಿ ಸೇರ್ಪಡೆಗೊಂಡರು. (ಒನ್ಇಂಡಿಯಾ ಕನ್ನಡ)