Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಥಿರಚಿತ್ರ ಛಾಯಾಗ್ರಾಹಕ ನಾಗದೇವ್ ನಿಧನ
ಕನ್ನಡ ಚಿತ್ರರಂಗದ ಸ್ಥಿರಚಿತ್ರ ಛಾಯಾಗ್ರಾಹಕ ನಾಗದೇವ್(40) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಅವರನ್ನು ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಕಳೆದ 20 ವರ್ಷಗಳಿಂದ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜಾಜಿನಗರ 6ನೇ ಬ್ಲಾಕ್ ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. ಕನ್ನಡದ 200ಕ್ಕೂ ಹೆಚ್ಚು ಸ್ಥಿರ ಚಿತ್ರಗಳಿಗೆ ಅಪ್ಪು ಅವರು ಕೆಲಸ ಮಾಡಿದ್ದಾರೆ.ಮುಂಗಾರು ಮಳೆ, ತಾಕತ್, ವಾಯುಪುತ್ರ ಅವರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಇತ್ತೀಚಿನ ಕೆಲವು ಚಿತ್ರಗಳು. ದಿವಂಗತ ಶಂಕರನಾಗ್ ಅವರ 'ನಿಗೂಢ ರಹಸ್ಯ' ಚಿತ್ರದ ಮೂಲಕ ಅಪ್ಪು ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಉಪೇಂದ್ರ ಸೇರಿದಂತೆ ಅನೇಕ ನಾಯಕ ನಟರ ಜೊತೆ ಕೆಲಸ ಮಾಡಿದ್ದರು.
ಅಪ್ಪು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಕೃಷ್ಣ ನೀ ಲೇಟಾಗಿ ಬಾರೋ, ಪ್ರೀತಿಯ ಹಂಗಾಮ, ಶಿವಕಾಶಿ ಚಿತ್ರಗಳು ತೆರೆಕಾಣಬೇಕಾದ ಚಿತ್ರಗಳು. ಅಪ್ಪು ಅವರು ಹೆಚ್ಚಾಗಿ ನವರಸ ನಾಯಕ ಜಗ್ಗೇಶ್ ಅವರ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ದಿವಂಗತ ನಾಗದೇವ್ ಅವರ ಭಾವಚಿತ್ರ ದಟ್ಸ್ ಕನ್ನಡದ ಫೋಟೋ ಬ್ಯಾಂಕಿನಲ್ಲಿ ಇಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಹಾಗಾಗಿ, ಅವರು ಕ್ಲಿಕ್ಕಿಸಿದ್ದ ಗಣೇಶ್ ಅವರ ಭಂಗಿಯೊಂದನ್ನು ಅಪ್ಪು ಅವರ ಕ್ಯಾಮರಾ ಕಲಾತ್ಮಕತೆಗೆ ನಿದರ್ಶನವಾಗಿ ಪ್ರಕಟಿಸಲಾಗಿದೆ- ಸಂಪಾದಕ