twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರು ನಡೆದರು, ಸ್ನಾನ ಮಾಡಿದರು

    By Staff
    |

    ಕಳೆದ ವಾರ ಪೃಷ್ಠದ ಕೆಳಭಾಗದ ‘ಚಪ್ಪೆ ಬದಲಾವಣೆ’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವರನಟ ಡಾ.ರಾಜ್‌ಕುಮಾರ್‌ ಅವರನ್ನು ತೀವ್ರ ನಿಗಾ ಘಟಕದಿಂದ ಆಸ್ಪತ್ರೆಯ ವಿಐಪಿ ಕೋಣೆಗೆ ವರ್ಗಾಯಿಸಲಾಗಿದೆ.

    ಸೋಮವಾರ (ಮಾ.17) ಸುಮಾರು 100 ಮೀಟರ್‌ಗಳಷ್ಟು ದೂರ ನಡೆದ ಅವರು ಬಲು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಸೋಮವಾರ ಅವರು ನಿರಾಯಾಸವಾಗಿ ಸ್ನಾನವನ್ನೂ ಮಾಡಿದರು. ಬಹು ವರ್ಷಗಳ ಕಾಲ ಯೋಗ ಮಾಡಿರುವುದರಿಂದ ತೊಂದರೆಯಿಂದ ರಾಜ್‌ ಬಲುಬೇಗ ಗುಣಮುಖರಾಗಬಲ್ಲರು ಎಂದು ಚೆನ್ನೈನ ಎಂಐಓಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಪಿ.ವಿ.ಎ.ಮೋಹನ್‌ದಾಸ್‌ ಹೇಳಿದರು.

    ಮಾರ್ಚ್‌ 19 ಅಥವಾ 20ನೇ ತಾರೀಕು ಅವರ ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅದಾದ 10 ದಿನಗಳ ನಂತರ ಅಣ್ಣಾವ್ರು ಡಿಸ್ಚಾರ್ಜ್‌ ಆಗಿ, ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಮರಳಲಿದ್ದಾರೆ.

    (ಇನ್ಫೋ ವಾರ್ತೆ)

    Post your views

    ಇದನ್ನೂ ಓದಿ-
    ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 10:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X