Don't Miss!
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಕುಕ್ಕುವಂತಿರುವ ಮಾನ್ಯ, ಅಂಧರಿಗೆ ಕಣ್ಣು ಕೊಡ್ತಾಳೆ!
ಮೊನ್ನೆ ನಟಿ ಮಾನ್ಯಗೆ ಹುಟ್ಟುಹಬ್ಬದ ಸಂಭ್ರಮ. ಇದು ಎಷ್ಟನೆಯ ಹುಟ್ಟುಹಬ್ಬ ಎಂದು ಕೇಳುವಂತಿಲ್ಲ.. ಆದರೆ ಹುಟ್ಟುಹಬ್ಬದ ದಿನ ಅವರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಅಂದರೆ, ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ಇನ್ನಷ್ಟು ಮಂದಿಯ ಕಣ್ಣು ತೆರೆಸಿದ್ದಾರೆ.
ಮರಣಾನಂತರ ಕಣ್ಣು ದಾನ ಮಾಡುವ ನಿರ್ಣಯ ಅಚಲ. ಈ ವರ್ಷದ ಹುಟ್ಟುಹಬ್ಬವನ್ನು ಸ್ಮರಣೀಯಗೊಳಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಮಾನ್ಯ ಹೇಳಿದ್ದಾರೆ.
ನಗರಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರು ಮತ್ತು ಅಂಧ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬದ ಸವಿಯನ್ನು ಹಂಚಿಕೊಂಡರು. ಊಟ ಮಾಡಿದರು. ಮನಬಿಚ್ಚಿ ಮಾತನಾಡಿದರು.
ವರ್ಷ, ಶಾಸ್ತ್ರಿ, ಅಂಬಿ, ಸುಂಟರಗಾಳಿ, ಬೆಳ್ಳಿಬೆಟ್ಟ ಚಿತ್ರದ ಮೂಲಕ ಗಮನ ಸೆಳೆದವರು ಮಾನ್ಯ. ಗಮನಾರ್ಹ ಅಭಿನಯದ ಜೊತೆಗೆ ಐಟಂ ಸಾಂಗ್ ಮೂಲಕವೂ ಗಮನ ಸೆಳೆದವರು. ಈಗ ತೆನೆಮನೆ ಸುಬ್ರಹ್ಮಣ್ಯ ನಿರ್ದೇಶನದ ‘ಪ್ರೀತಿ ಒಂಥರಾ’ ಸೇರಿದಂತೆ ಐದು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಕನ್ನಡ ಪ್ರೇಕ್ಷಕರು ನನ್ನನ್ನು ಒಪ್ಪಿಕೊಂಡಿದ್ದಾರೆ. ನಾನವರನ್ನು ಕೃತಜ್ಞತೆಯಿಂದ ಅಪ್ಪಿಕೊಂಡಿದ್ದೇನೆ’ ಎನ್ನುವ ಮಾನ್ಯಗೆ, ಸ್ಯಾಂಡಲ್ವುಡ್ನಲ್ಲಿ ಅವಕಾಶಗಳ ಕಿಟಕಿ ತೆರೆದುಕೊಂಡಿದೆ.