ಉಪೇಂದ್ರ ಅಭಿಮಾನಿಗಳಿಗೊಂದು ಸರಳ ಸೂಕ್ಷ್ಮ ಪ್ರಶ್ನೆ
ರಿಯಲ್ ಸ್ಟಾರ್ ಅಭಿಮಾನಿಗಳಿಗೊಂದು ಸರಳ, ಸೂಕ್ಷ್ಮ ಹಾಗೂ ನೇರವಾದ ಪ್ರಶ್ನೆ. ಮೊದಲು ಯಾರ ಚಿತ್ರ ರಿಲೀಸ್ ಆಗ್ಬೇಕು ನೀವೇ ಹೇಳಿ? 'ಕಠಾರಿವೀರ ಸುರಸುಂದರಾಂಗಿ' ಅಥವಾ 'ಗಾಡ್ಫಾದರ್'. ಯೋಚಿಸಿ, ತೀರ್ಮಾನಿಸಿ ಕಾಮೆಂಟ್ ಮಾಡಿ. ಇವೆರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆಯಾದರೆ ಆಗಬಹುದಾದ ಅನಾಹುತವಾದರೂ ಏನು? ಪ್ರೇಕ್ಷಕರೂ ಪರಿಸ್ಥಿತಿ ಏನಾಗಲಿದೆ?
ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ತಲೆಯೆತ್ತಿರುವ ಈ ಸಮಸ್ಯೆ ಇನ್ನೊಂದೆರಡು ದಿನಗಳಲ್ಲಿ ಪರಿಹಾರ ಸಿಗಬಹುದು ಅಥವಾ ಸಿಗದೆಯೂ ಇರಬಹುದು. ಆದಷ್ಟು ಬೇಗ ಸಮಸ್ಯೆ ಇತ್ಯರ್ಥವಾಗಲಿ ಎಂದು ಆಶಿಸೋಣ. ಆದರೆ ಅದಕ್ಕೂ ಮುನ್ನ ಚಿತ್ರದ ಹಣೆಬರಹ ನಿರ್ಧರಿಸುವ ಪ್ರೇಕ್ಷಕ ಮಹಾಪ್ರಭುಗಳಾದ ತಾವು ತಮ್ಮ ತೀರ್ಮಾನ ತಿಳಿಸಿ ಎಂಬುದು ನಮ್ಮ ಆಶಯ.
ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ಸಂಯಮದಿಂದ ಕಾಮೆಂಟ್ ಬಾಕ್ಸಲ್ಲಿ ಹಾಕಿ. ಕೆ.ಮಂಜು ಹಾಗೂ ಮುನಿರತ್ನ ನಡುವಿನ ಜಟಾಪಟಿಗೆ ಅಂತ್ಯಹಾಡಿ. ನೀವು ತಿಳಿದಂತೆ ಯಾರದು ತಪ್ಪು ಯಾರದು ಒಪ್ಪು? ಇಲ್ಲಾ ಎರಡೂ ಚಿತ್ರಗಳೂ ಒಟ್ಟಿಗೆ ಬಿಡುಗಡೆಯಾಗಲಿ ಎನ್ನುವುದಾದರೆ. ಅದೇನಾಗುತ್ತದೋ ನೋಡಿಯೇ ಬಿಡೋಣ? ಹಾಗೆಯೇ ಆಗಲಿ. ಏನಂತೀರಾ? (ಒನ್ಇಂಡಿಯಾ ಕನ್ನಡ)


Click it and Unblock the Notifications











