ಸಾರಥಿ ದರ್ಶನ್ ಗೆ ಶಿವಕುಮಾರಸ್ವಾಮಿಗಳ ಆಶೀರ್ವಾದ

ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶಿವಕುಮಾರ ಸ್ವಾಮಿಗಳ ಆಶೀರ್ವಾದ ದರ್ಶನ್ ಪಡೆದದ್ದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನು ನೀಡಿದೆ. ಸಾಕಷ್ಟು ಅಬಿಮಾನಿಗಳು ತುಮಕೂರಿನಲ್ಲಿ ದರ್ಶನ್ ಬಿಡುಗಡೆಗೆ ಹಂಬಲಿಸಿ ಉರುಳುಸೇವೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ತುಮಕೂರಿನಲ್ಲಿ ಸಾರಥಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ತುಮಕೂರಿನಲ್ಲಿ ಅಸಂಖ್ಯಾತ ಅಭಿಮಾನಿಗಳು ದರ್ಶನ್ ರನ್ನು ನೋಡಲು ಬಂದಿದ್ದರು.
ಪತ್ನಿಗೆ ಹಲ್ಲೆ ಮಾಡಿ ಜೈಲುಸೇರಿದ್ದ ನಟ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡ ಮೇಲೆ ಸಾಕಷ್ಟು ಬದಲಾಗಿದ್ದಾರೆ. ಜೈಲುವಾಸ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂಬುದು ಎಲ್ಲರ ಅಭಿಪ್ರಾಯ. ಬಿಡುಗಡೆಗೊಂಡ ತಕ್ಷಣ ದರ್ಶನ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿದ್ದರು. ಈಗ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ್ದಾರೆ.
ಇವೆಲ್ಲವೂ ಜನರ ಈ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಠಿಕೊಡುವಂತಿದೆ ಎನ್ನಬಹುದು. ಒಟ್ಟಿನಲ್ಲಿ ದರ್ಶನ್ ಬದಲಾಗಿದ್ದಾರೆ ಅಥವಾ ಬದಲಾಗುತ್ತಿದ್ದಾರೆ. ಈಗ ದರ್ಶನ್ ಗೆ ಸಾರಥಿ ಸಿನಿಮಾದ ಯಶಸ್ಸೂ ಜೊತೆಯಾಗಿದೆ. ಮುಂದೆ ನಡೆಯಲಿರುವ ಸಾರಥಿಯ ರೋಡ್ ಶೋ ಸಾಕಷ್ಟು ಯಶಸ್ವಿಯಾಗುವ ನಿರೀಕ್ಷೆಯನ್ನಂತೂ ಮೂಡಿಸಿದೆ.


Click it and Unblock the Notifications











