twitter
    For Quick Alerts
    ALLOW NOTIFICATIONS  
    For Daily Alerts

    ಸಾರಥಿ ದರ್ಶನ್ ಗೆ ಶಿವಕುಮಾರಸ್ವಾಮಿಗಳ ಆಶೀರ್ವಾದ

    |

    Darshan
    ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ಚಾಲೆಂಜಿಂಗ ಸ್ಟಾರ್ ದರ್ಶನ್ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಶಿವಕುಮಾರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸ್ವಾಮೀಜಿಗಳು ದರ್ಶನ್ ಗೆ ಶಾಲಿ ಹೊದಿಸಿ ಆಶೀರ್ವದಿಸಿದರು. ನಟ ದರ್ಶನ್ ಸ್ವಾಮೀಜಿಗಳ ದರ್ಶನದಿಂದ ಪುಳಕಿತರಾದರು.

    ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶಿವಕುಮಾರ ಸ್ವಾಮಿಗಳ ಆಶೀರ್ವಾದ ದರ್ಶನ್ ಪಡೆದದ್ದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನು ನೀಡಿದೆ. ಸಾಕಷ್ಟು ಅಬಿಮಾನಿಗಳು ತುಮಕೂರಿನಲ್ಲಿ ದರ್ಶನ್ ಬಿಡುಗಡೆಗೆ ಹಂಬಲಿಸಿ ಉರುಳುಸೇವೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ತುಮಕೂರಿನಲ್ಲಿ ಸಾರಥಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ತುಮಕೂರಿನಲ್ಲಿ ಅಸಂಖ್ಯಾತ ಅಭಿಮಾನಿಗಳು ದರ್ಶನ್ ರನ್ನು ನೋಡಲು ಬಂದಿದ್ದರು.

    ಪತ್ನಿಗೆ ಹಲ್ಲೆ ಮಾಡಿ ಜೈಲುಸೇರಿದ್ದ ನಟ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡ ಮೇಲೆ ಸಾಕಷ್ಟು ಬದಲಾಗಿದ್ದಾರೆ. ಜೈಲುವಾಸ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂಬುದು ಎಲ್ಲರ ಅಭಿಪ್ರಾಯ. ಬಿಡುಗಡೆಗೊಂಡ ತಕ್ಷಣ ದರ್ಶನ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿದ್ದರು. ಈಗ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ್ದಾರೆ.

    ಇವೆಲ್ಲವೂ ಜನರ ಈ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಠಿಕೊಡುವಂತಿದೆ ಎನ್ನಬಹುದು. ಒಟ್ಟಿನಲ್ಲಿ ದರ್ಶನ್ ಬದಲಾಗಿದ್ದಾರೆ ಅಥವಾ ಬದಲಾಗುತ್ತಿದ್ದಾರೆ. ಈಗ ದರ್ಶನ್ ಗೆ ಸಾರಥಿ ಸಿನಿಮಾದ ಯಶಸ್ಸೂ ಜೊತೆಯಾಗಿದೆ. ಮುಂದೆ ನಡೆಯಲಿರುವ ಸಾರಥಿಯ ರೋಡ್ ಶೋ ಸಾಕಷ್ಟು ಯಶಸ್ವಿಯಾಗುವ ನಿರೀಕ್ಷೆಯನ್ನಂತೂ ಮೂಡಿಸಿದೆ.

    English summary
    Actor Darshan visited Sidhaganga Math today. Shivakumar Swamiji blessed Darshan. 
 
    Wednesday, October 19, 2011, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X