Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್, ವೇದಿಕಾ ಸಂಗಮಕ್ಕೆ ಡಿಟಿಎಸ್ ಸ್ಪರ್ಶ
ಅದ್ದೂರಿ ಪ್ರಚಾರಕ್ಕೆ ಹೆಸರಾದವರು ಎಸ್.ವಿ.ಬಾಬು. ಏನೇ ಮಾಡಿದರು ಅದ್ದೂರಿಯಾಗಿ ಮಾಡುವ ಬಾಬು ಅವರು ಸದ್ದಿಲದೆ ನಿರ್ಮಿಸಿರುವ ಚಿತ್ರ ಸಂಗಮ. ಸದ್ದಿಲದೆ ಆರಂಭವಾದರೂ ಶ್ರೀಮಂತಿಕೆಯ ಚಿತ್ರವಂತೂ ಹೌದು. ಚಿತ್ರೀಕರಣ ಹಾಗೂ ನಂತರದ ಪ್ರಕ್ರಿಯೆ ನಿಗದಿತ ಯೋಜನೆಯಂತೆ ಪೂರ್ಣವಾಗಿರುವ ಚಿತ್ರಕ್ಕೆ ಕರಿಸುಬ್ಬು ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಕೆ ಪ್ರಕ್ರಿಯೆ ಕೂಡ ಸಂಪೂರ್ಣವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಸಂಗಮದಲ್ಲಿ ಅನೇಕ ಸಂಗಮವಾಗಿದೆ. ಮೊದಲಿಗೆ ಕನ್ನಡ ಚಿತ್ರರಂಗದೊಂದಿಗೆ ರವಿವರ್ಮ ಎಂಬ ನೂತನ ನಿರ್ದೇಶಕನ ಸಂಗಮ, ಅದೇರೀತಿ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್ ಅವರ ಚೊಚ್ಚಲ ಕನ್ನಡ ಚಿತ್ರ ಈ ಸಂಗಮ ಹಾಗೂ ನಾಯಕ ಗಣೇಶ್ ಹಾಗೂ ಕನ್ನಡತಿ ವೇದಿಕಾ ಜೋಡಿಯ ಪ್ರಥಮ ಚಿತ್ರ ಸಂಗಮ. ಹೀಗೆ ಹಲವು ವಿಶೇಷಗಳ ಸಂಗಮ ಸದ್ಯದಲ್ಲೇ ತೆರೆಕಾಣಲಿದೆ. ಜಂಕಾರ್ ಸಂಸ್ಥೆ ಮೂಲಕ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಕೇಳುಗರ ಹೃದಯದಲ್ಲಿ ಮನೆ ಮಾಡಿದೆ.
ಎಸ್.ವಿ.ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶೇಖರ್ಚಂದ್ರರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ಗಂಡಸಿ ನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ವೇದಿಕಾ, ರಂಗಾಯಣರಘು, ಕೋಮಲ್, ಸಾಧುಕೋಕಿಲ, ಧರ್ಮ, ತುಳಸಿಶಿವಮಣಿ, ಬಿ.ಜಯಮ್ಮ, ಬ್ರಹ್ಮಾವರ್, ಶಾಂತಮ್ಮ, ಕೋಟೆ ಪ್ರಭಾಕರ್, ಯಶಸ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡಸಿನಿವಾರ್ತೆ)