Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋನಾಲ್ ಚೌಹಾಣ್ ಎಂಬ ಬಿಂಕದ ಸಿಂಗಾರಿ!
ಜನ್ನತ್ ಚಿತ್ರಕ್ಕೂ ಮುನ್ನ ಆಕೆ 'ಚೆಲುವೆಯೆ...' ಚಿತ್ರಕ್ಕೆ ಸಹಿ ಹಾಕಿದ್ದರಂತೆ. ಹಾಗಾಗಿ ಅನಿವಾರ್ಯವಾಗಿ ನಟಿಸಬೇಕಾಗಿತ್ತು ಎಂಬು ಮಾತನ್ನು ಸೋನಾಲ್ ತಳ್ಳಿಹಾಕುತ್ತಾರೆ. ಚಿತ್ರಕಥೆ ಚೆನ್ನಾಗಿತ್ತು. ಇಂತಹ ಚಿತ್ರಗಳನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಹಾಗಾಗಿ ಈ ಚಿತ್ರಕ್ಕೆ ಒಪ್ಪಿಗೆ ಕೊಟ್ಟೆ. ಎಂಬುದು ಅವರ ವಾದ.
ಜನ್ನತ್ ನಲ್ಲಿ ಇಮ್ರಾನ್ ಹಸ್ಮಿಯೊಂದಿಗೆ ನಟಿಸಿದ ಈಕೆ ಶಿವರಾಜ್ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆಯಂತೆ. ಭಾಷೆ ಸಮಸ್ಯೆಯಾಗಿರುವುದರಿಂದ ಶಿವರಾಜ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಇಂತಹ ಉತ್ತಮ ನಟರೊಂದಿಗೆ ನಟಿಸಲು ನಾನು ಸದಾ ಸಿದ್ಧ ಎಂದು ಹೇಳಿದ್ದಾರೆ.
'ಚೆಲುವೆಯೆ...' ಚಿತ್ರದ ವಿಶೇಷವೆಂದರೆ, ಒಂದು ಹಾಡನ್ನ್ನು ವಿಶ್ವದ ಏಳು ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಏಳು ಅದ್ಭುತಗಳೊಂದಿಗೆ ತನ್ನ ಸೌಂದರ್ಯವನ್ನು ಹೋಲಿಸಿರುವ ಬಗ್ಗೆ ಸೋನಾಲ್ ನಾಚಿ ನೀರಾಗಿದ್ದಾರೆ. ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ಸೋನಾಲ್ ಪಾತ್ರವಾಗಿದ್ದಾರೆ. ಇದಕ್ಕೆಲ್ಲಾ ಜನ್ನತ್ ಚಿತ್ರವೇ ಕಾರಣವಂತೆ. ಅಂದಹಾಗೆ ಸಂಭಾವನೆ ಎಷ್ಟು ಎಂದು ತಿಳಿಸಿಲ್ಲ!
ಜನ್ನತ್ ಚಿತ್ರವನ್ನು ಮೆಚ್ಚಿಕೊಂಡಿರುವ ಮಹೇಶ್ ಭಟ್ ತನ್ನ ಮುಂದಿನ ಚಿತ್ರಕ್ಕೆ ಸೋನಾಲ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಥೆ, ಚಿತ್ರಕಥೆಗಳು ಸರಿ ಇಲ್ಲದ ಕಾರಣಕ್ಕೆ 'ರಾಜ್' ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳನ್ನು ಸರಾಸಗಟಾಗಿ ತಳ್ಳಿಹಾಕಿ ಎದೆಗಾರಿಕೆ ಪ್ರದರ್ಶಿಸಿದ್ದಾರೆ ಸೋನಾಲ್.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸೋನಲ್
ಚೌಹಾಣ್
ಚಿತ್ರಪಟ
ಚೆಲುವೆಯೆ
ನಿನ್ನ
ನೋಡಲು
ಚಿತ್ರದಲ್ಲಿ
ಸೋನಾಲ್