Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ ನಿಂದ ರಾಮುರನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯುತ್ತಿರುವ ನಿರ್ದೇಶಕ. ಶಿವರಾಜ್ ಕುಮಾರ್ ಅಭಿನಯಿಸಿದ, ಶತದಿನೋತ್ಸವ ಆಚರಿಸಿಕೊಂಡ 'ಸಿಂಹದ ಮರಿ' ನಿರ್ದೇಶಿಸಿದ ಖ್ಯಾತಿಯೂ ಓಂ ಪ್ರಕಾಶ್ ಗಿದೆ. ಇದಾದ ಎಷ್ಟೋ ದಿನಗಳ ನಂತರ ಶಿವಣ್ಣನ ನಾಯಕತ್ವದಲ್ಲಿ 'ಎ.ಕೆ 47' ನಿರ್ದೇಶಿಸಿ ತಾವೊಬ್ಬ ಅದ್ಭುತ ತಂತ್ರಜ್ಞ ಎಂಬುದನ್ನು ಸಾಬೀತು ಪಡಿಸಿದರು.ನಿರ್ಮಾಪಕ ರಾಮು ಅವರಿಗೂ ಒಳ್ಳೆಯ ಗಳಿಕೆ ತಂದುಕೊಟ್ಟ ಚಿತ್ರ.
ನಾಲ್ಕು ವರ್ಷಗಳ ಹಿಂದೆ ದರ್ಶನ್ ಗೂ ಹೊಸ ಇಮೇಜ್ ತಂದುಕೊಟ್ಟದ್ದು ಇದೇ ರಾಮು, ಓಂ ಜೋಡಿ. "ಕಲಾಸಿ ಪಾಳ್ಯ" ಸೆಕೆಂಡ್ಸ್ ದಂಧೆ, ರೌಡಿಸಂ, ರಾಜಕೀಯ, ಭ್ರಷ್ಟ ಪೊಲೀಸ್ ಅಧಿಕಾರಿಗಳ ಕರ್ಮಕಾಂಡಸುತ್ತ ಹೆಣೆಯಲಾದ ಕತೆಯನ್ನು ಕಲಾಸಿಪಾಳ್ಯ ಒಳಗೊಂಡಿತ್ತು. ಬಾಕ್ಸಾಫೀಸ್ ನಲ್ಲಿ ಗೆದ್ದ ಸಿನಿಮಾ.
ನಾಲ್ಕರಲ್ಲಿ ನಾಲ್ಕು ಹಿಟ್ ಚಿತ್ರಗಳನ್ನು ಕೊಟ್ಟಿರುವ ರಾಮು, ಓಂ ಜೋಡಿ 'ಕಿರಣ್ ಬೇಡಿ' ಚಿತ್ರದ ಬಗ್ಗೆ ಇನ್ನಿಲ್ಲದ ನಂಬಿಕೆಯನ್ನು ಇಟ್ಟುಕೊಂಡಿದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ನಿರ್ಮಾಪಕ ರಾಮು ಮತ್ತು ನಿರ್ದೇಶಕ ಓಂ ಪ್ರಕಾಶ್ ಇದ್ದಾರೆ. ಕಾದು ನೋಡೋಣ?
(ದಟ್ಸ್
ಕನ್ನಡ
ಚಿತ್ರವಾರ್ತೆ)
ಯುಗಾದಿಗೆ
ಬರುತ್ತಿದ್ದಾರೆ
ಕನ್ನಡದ
ಕಿರಣ್
ಬೇಡಿ
ಕನ್ನಡ
ಚಿತ್ರರಂಗದ
ದುಸ್ಥಿತಿಯ
ಬಗ್ಗೆ
ರಾಮು
ವಿಷಾದ
ಪ್ರೇಕ್ಷಕರ
ಎದೆ
ಝಲ್ಲೆನ್ನಿಸಲಿದ್ದಾರೆ
ಮಾಲಾಶ್ರೀ