Don't Miss!
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿರಿಯರಿಗೇ ಮಾದರಿಯಾದ ತೆಲುಗು ಸ್ಟಾರ್ ಜೋಡಿ
ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿಆರ್, ಆಶ್ಚರ್ಯವೆಂಬಂತೆ ಸ್ನೇಹಿತರಾಗಿದ್ದಾರೆ. ಇತ್ತೀಚಿಗೆ ನಡೆದ ಜೂ. ಎನ್ ಟಿಆರ್ ಅವರ 'ಬಾದ್ ಶಾ' ಚಿತ್ರದ ಮುಹೂರ್ತದ ವೇಳೆ ಬಂದಿದ್ದ ರಾಮ್ ಚರಣ್ ತೇಜ, ರಾಕಿ ನಟನಿಗೆ ಹಸ್ತಲಾಘವ ಮಾಡಿ ಶುಭ ಹಾರೈಸಿದರು. ಈ ಅಪರೂಪದ ಕ್ಷಣಕ್ಕೆ ಸೇರಿದ್ದ ಅಪಾರ ಜನಸ್ತೋಮ ಸಾಕ್ಷಿಯಾಯಿತು.
ಈ ಇಬ್ಬರು ನಟರ ಕುಟುಂಬದಲ್ಲಿ ಬಿರುಕು ತುಂಬಾ ವರ್ಷಗಳಿಂದ ಇತ್ತು. ಮೊನ್ನೆ ಮೊನ್ನೆ ತೆಲುಗು ಮೆಗಾ ಸ್ಟಾರ್ ಚಿರಂಜೀವಿ, ಜೂ. ಎನ್ ಟಿಆರ್ ಚಿಕ್ಕಪ್ಪ ಬಾಲಕೃಷ್ಣ ಕುರಿತು ಸಾವರ್ಜನಿಕ ಸಮಾರಂಭದ ವೇದಿಕೆಯೊಂದರಲ್ಲಿ ಲಘುವಾಗಿ ಮಾತನಾಡಿದ್ದರು. ಅವರು ಚಿಕ್ಕ ಮಗು ಎಂದು ಲೇವಡಿ ಮಾಡಿದ್ದರು. ನಂತರ ಅವರ ಇನ್ನೊಂದು ಮುಖವನ್ನು ತಾವು ತೋರಿಸುವುದಾಗಿ ಕಾಲೆಳೆದಿದ್ದರು.
ಆದರೆ ಅದೇ ಕುಟುಂಬಗಳ ಬೆಳೆಯುತ್ತಿರುವ ಕುಡಿಗಳಾದ ಈ ಇಬ್ಬರು ನಟರು, ಅವೆಲ್ಲವನ್ನೂ ಪಕ್ಕಕ್ಕೆ ಎಸೆದು ವೃತ್ತಿಧರ್ಮ ಮೆರೆದಿದ್ದಾರೆ. ವೃತ್ತಿಗೂ, ವೈಯಕ್ತಿಕಕ್ಕೂ ಇರುವ ನಡುವಿನ ಅಂತರವನ್ನು ಹಾಗೂ ಸಾಧಿಸಬೇಕಾದದ್ದು ಮಿತ್ರುತ್ವವನ್ನು ಹೊರತೂ ಶತ್ರುತ್ವವನ್ನಲ್ಲ ಎಂಬುದನ್ನು ಹಿರಿಯರಿಗಿಂತ ಬೇಗ ಅರ್ಥಮಾಡಿಕೊಂಡು ಮಾದರಿ ಎನಿಸಿದ್ದಾರೆ. ಈ ಬಾಂಡ್ ಇನ್ನಷ್ಟು ಗಟ್ಟಿಯಾಗಲಿ ಎಂಬುದು ಸಿನಿಮಾಪ್ರಿಯರ ಹಾರೈಕೆ. (ಏಜೆನ್ಸೀಸ್)