Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರಿಕಥೆ ಹಸನಾಗಿಸಲು ಪತ್ರಕರ್ತರಿಗೆ ದಯಾಳ್ ಮೊರೆ
ತಮಿಳು ಶೈಲಿಯಲ್ಲಿ ಕನ್ನಡ ಮಾತಾಡುವ ನಿರ್ದೆಶಕ ದಯಾಳ್ ಪದ್ಮನಾಭನ್ಗೆ ಈ ಸಲ ತುಸು ಹೆಚ್ಚೇ ಉತ್ಸಾಹದಿಂದ ಮಾತನಾಡಿದರು. ತಮ್ಮ ನಿರ್ದೇಶನದ ಹೊಸ ಚಿತ್ರ "ಶ್ರೀ ಹರಿಕಥೆ" ಕುರಿತು ಅವರಿಗೆ ಅಪಾರ ಭರವಸೆ. ಅದಕ್ಕೇ ಬಿಡುಗಡೆಗೆ ಮುನ್ನವೇ ಚಿತ್ರವನ್ನು ಪಕ್ಕಾ ರೀತಿಯಲ್ಲಿ ಟ್ರಿಮ್ ಮಾಡುವ ಉದ್ದೇಶ ಅವರದ್ದು.
ಈಗಾಗಲೇ ತಮ್ಮ ಎಂಬತ್ತು ಗೆಳೆಯರಿಗೆ ಅವರು ಚಿತ್ರ ತೋರಿಸಿದ್ದಾರೆ. ಕೆಲವರು ಸಲಹೆ ಕೊಟ್ಟರೆಂಬ ಕಾರಣಕ್ಕೆ ನಾಲ್ಕು ನಿಮಿಷದಷ್ಟು ಟ್ರಿಮ್ ಮಾಡಿದ್ದಾರೆ. ಅವರು ಎರಡನೇ ಹಂತವಾಗಿ ಪತ್ರಕರ್ತರಿಗೆ ಬಿಡುಗಡೆಗೆ ಒಂದು ವಾರ ಮೊದಲೇ ಸಿನಿಮಾ ತೋರಿಸಲು ನಿರ್ಧರಿಸಿದ್ದಾರೆ. ಅವರ ಷರತ್ತೆಂದರೆ- ಮೊದಲಿಗೆ ಸಾದಾ ಪ್ರೇಕ್ಷಕನಂತೆ ಸಿನಿಮಾ ನೋಡಬೇಕು; ವಿಮರ್ಶೆ ಮಾಡುವ ದೃಷ್ಟಿಯಿಂದ ಅಲ್ಲ. ಏನಾದರೂ ಲೋಪ ಇದೆ ಎನ್ನಿಸಿದರೆ ಅದನ್ನು ಮುಕ್ತವಾಗಿ ಹೇಳಬೇಕು. ಹೆಚ್ಚು ಅಭಿಪ್ರಾಯಗಳನ್ನು ಆಧರಿಸಿ ಆಗ ಮತ್ತೆ ಚಿತ್ರವನ್ನು ಟ್ರಿಮ್ ಮಾಡಬಹುದೆಂಬುದು ಅವರ ಯೋಚನೆ.
ನನ್ನ ಆರು ಚಿತ್ರಗಳಲ್ಲಿ ಇದೇ ಬೆಸ್ಟ್ ಅಂತ ಕ್ಲೋಸ್ ಫ್ರೆಂಡ್ಸ್ ಹೇಳಿದಾರೆ. ನಂಗೂ "ಚೆನ್ನಾಗಿ ಬಂದಿದೆ ಅಂತ ಅನ್ನಿಸ್ತಿದೆ. ಒಂದು ಒಳ್ಳೆ ಸಿನಿಮಾ ಕೊಡೋಣ ಎಂಬ ಆಸೆ. ಅದಕ್ಕೇ ಇಷ್ಟೆಲ್ಲಾ ಒದ್ದಾಡ್ತಾ ಇದೀನಿ" ಎಂದರು ದಯಾಳ್. ಸರ್ಕಸ್ ಚಿತ್ರ ಮಕಾಡೆಯಾದ ಮೇಲೆ ಸಾಕಷ್ಟು ಹಣ ಕಳೆದುಕೊಂಡಿದ್ದ ದಯಾಳ್ ಅಲ್ಲಿ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಎಲ್ಲಾ ದಾರಿಗಳನ್ನೂ ಈಗ ಹುಡುಕುತ್ತಿರುವುದಂತೂ ಸ್ಪಷ್ಟ.
ಮೊದಲೇ ಚಿತ್ರ ನೋಡಿ ಸಲಹೆ ಕೊಡುವಿರಾ ಎಂಬ ಅವರ ಬೇಡಿಕೆಗೆ ಒಂದಿಬ್ಬರು ಪತ್ರಕರ್ತರು ಆಗಬಹುದು ಎಂದರು. ಅದು ಎಲ್ಲಾ ಪತ್ರಕರ್ತರ ಅಭಿಪ್ರಾಯ ಎಂದು ಭಾವಿಸಿ ದಯಾಳ್ ಹಾಗೂ ನಾಯಕ ಶ್ರೀಮುರಳಿ ಧನ್ಯವಾದ ಹೇಳಿದರು. ಈ ಘಟನೆ ನಡೆಯುವ ಮುನ್ನ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಅಂದಹಾಗೆ, ಮಾರ್ಚ್ 5ರಂದು "ಶ್ರೀ ಹರಿಕಥೆ" ತೆರೆಕಾಣಲಿದೆ.