twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಮತ್ತೊಮ್ಮೆ ಕಿಚ್ಚೆಬ್ಬಿಸಲಿರುವ ಸುದೀಪ್

    By Rajendra
    |

    Actor Sudeep
    ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಕಿಚ್ಚ ಸುದೀಪ್ ಸ್ಟೈಲಿಷ್ ನಟ, ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ಅವರು ಮತ್ತೊಮ್ಮೆ ಕನ್ನಡದ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. 'ಏನೋ ಒಂಥರಾ' ಚಿತ್ರದ ಮೂಲಕ ಕೈಸುಟ್ಟಿಕೊಂಡಿರುವ ನಿರ್ಮಾಪಕ ಚಂದ್ರಶೇಖರ್ ಈ ಬಾರಿ ಸುದೀಪ್‌ಗೆ ಆ ಚಾನ್ಸ್ ಕೊಡುತ್ತಿದ್ದಾರೆ.

    ಸದ್ಯಕ್ಕೆ ಸುದೀಪ್ ತೆಲುಗಿನ 'ಈಗ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ 'ವರದನಾಯಕ' ಚಿತ್ರದ ಶೂಟಿಂಗ್ ಮುಗಿಸಿಕೊಡಬೇಕಾಗಿದೆ. ಏತನ್ಮಧ್ಯೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಸುದೀಪ್ ಈ ಹಿಂದೆ ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಚಿತ್ರಗಳನ್ನು ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದಾರೆ.

    ಇನ್ನು ನಿರ್ಮಾಪಕ ಚಂದ್ರಶೇಖರ್ ವಿಚಾರಕ್ಕೆ ಬಂದರೆ, 'ಬಿಂದಾಸ್' (ಪುನೀತ್ ಮತ್ತು ಹಂಸಿಕಾ ಮೋತ್ವಾನಿ) ಚಿತ್ರದ ಮೂಲಕ ಏನೋ ಒಂದಷ್ಟು ದುಡ್ಡು ಕಾಸು ನೋಡಿದ್ದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಏನೋ ಒಂಥರಾ' ಮಾಡಿ ರು.3 ಕೋಟಿ ಸಾಲದಲ್ಲಿ ಬಿದ್ದರು.

    ಚಂದ್ರಶೇಖರ್ ಪಾಲಿಗೆ ಈಗ ಸುದೀಪ್ ಶ್ರೀಕೃಷ್ಣ ಪರಮಾತ್ಮನಂತೆ ಕಾಣಿಸುತ್ತಿದ್ದಾರೆ. ಸಾಲದ ಸುಳಿಯಿಂದ ತಾವು ಬಚಾವ್ ಆದರೆ ಸಾಕು ಎಂದು ಸುದೀಪ್ ಅವರನ್ನು ಸಂಪರ್ಕಿಸಿದ್ದಾರಂತೆ. ಇನ್ನು ಸುದೀಪ್ ಗ್ರೀನ್ ಸಿಗ್ನಲ್ ಕೊಡುವುದೊಂದು ಬಾಕಿ ಇದೆ. ಈ ಚಿತ್ರಕ್ಕೆ ಅನುಷ್ಕಾ ಶೆಟ್ಟಿ, ಕಾಜಲ್ ಅಗರವಾಲ್ ಅಥವಾ ತಮನ್ನಾರನ್ನು ಕರೆತರುವ ಬಗ್ಗೆಯೂ ಚಿಂತನೆ ನಡೆದಿದೆ. (ಏಜೆನ್ಸೀಸ್)

    English summary
    Kannada actor Kichcha Sudeep is taking up another direction in Kannada for producer Chandrasekhar. The producer is aiming for Anushka Shetty or Kajal Agarwal or Tamanna as heroine of his film.
    Friday, February 28, 2014, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X