Don't Miss!
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರುಚಿತಾ : ಕಾವಾರಿದ ಬಳಿಕ ಕಲೆಯ ನೆನಪು
- ರಾಜು ಮಹತಿ
ನಟರ ವಿಷಯ ಗೊತ್ತಿಲ್ಲ ; ನಟಿಯರ ಮಟ್ಟಿಗಂತೂ ಈ ಮಾತು ನಟನೆಯ ಮಟ್ಟಿಗೆ ಅನ್ವಯಿಸುತ್ತದೆ. ಹರಯದ ಉತ್ಸಾಹದಲ್ಲಿ ಅವಕಾಶಗಳಿಗಾಗಿ ಏನೆಲ್ಲವನ್ನೂ ಮಾಡುವ, ಬಿಚ್ಚಾಟವಾಡುವ ಕಣ್ಣಾಮುಚ್ಚಾಲೆಯಾಡುವ ನಟಿಯರು, ತಮ್ಮ ಚಾರ್ಮ್ ಮಾಸುತ್ತಿದೆ ಅನ್ನುವುದು ಅರಿವಾಗುತ್ತಿದ್ದಂತೆಯೇ ಕಲೆಯ ಮುಖವಾಡ ತೊಡಲು ಆರಂಭಿಸುತ್ತಾರೆ. ಉದಾಹರಣೆಗೆ ಕಪೂರ್ ಕುಟುಂಬದ ಕುಡಿ ಕರೀನಾಳನ್ನೇ ನೋಡಿ :
ಅಭಿನಯದ ಗಂಧಗಾಳಿಯೂ ಗೊತ್ತಿರದ ಕರೀನಾ ಬಾಲಿವುಡ್ನಲ್ಲಿ ಸಂಚಲನೆ ಏಳಿಸಿದ್ದೇ ತನ್ನ ಗ್ಲ್ಯಾಮರ್ ಮೂಲಕ. ಆದರೆ ಮಾಂಸದ ಅಡ್ಡೆಯಂತಿರುವ ಬಾಲಿವುಡ್ನಲ್ಲಿ ಗ್ಲ್ಯಾಮರ್ನ ಆಯುಸ್ಸು ತುಂಬಾ ಕಡಿಮೆ. ಈ ಸತ್ಯ ಅರಿವಾಗುತ್ತಿದ್ದಂತಯೇ ಕರೀನಾ ಕಲಾತ್ಮಕ ಚಿತ್ರಗಳ ಮಾತನಾಡುತ್ತಿದ್ದಾಳೆ. ‘ಚಮೇಲಿ’ ಎನ್ನುವ ಅರೆಕಲಾತ್ಮಕ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿಯೂ ಇದ್ದಾಳೆ. ನಿರೀಕ್ಷೆಗೆ ತಕ್ಕಂತೆ ‘ಚಮೇಲಿ’ ಗೆಲ್ಲದಿದ್ದರೂ, ಕರೀನಾಳ ಹೊಸವೇಷ ಜನರ ಕುತೂಹಲಕ್ಕೆ, ಮಾಧ್ಯಮಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಚಮೇಲಿ ಬಗ್ಗೆ ಕರೀನಾ ತೀರಾ ಜಾಣತನದಿಂದ ಮಾತನಾಡುತ್ತಾಳೆ. ನನ್ನ ಕಾಲಮೇಲೆ ನಿಲ್ಲುವ ಉದ್ದೇಶದಿಂದ ಚಿತ್ರರಂಗ ಪ್ರವೇಶಿಸಿದೆ. ಈಗ ಸಾಕಷ್ಟು ದುಡ್ಡು ಸಂಪಾದಿಸಿದ್ದೇನೆ. ಈಗ ನನ್ನೊಳಗಿನ ಕಲಾವಿದೆಯ ಹಸಿವು ತೀರಬೇಕು..... ಮುಂತಾಗಿ ಕರೀನಾ ಮಾತನಾಡುತ್ತಾಳೆ. ಇದಪ್ಪಾ ವರಸೆ ಎಂದು ಬೆಚ್ಚಿ ಬೀಳುವ ವರಸೆ ಅಭಿಮಾನಿಗಳದು !
ಕರೀನಾ ಅಷ್ಟೇ ಅಲ್ಲ , ಕನ್ನಡತಿ ಸೌಂದರ್ಯಳನ್ನೇ ನೋಡಿ- ಮಾರುಕಟ್ಟೆ ಕುಸಿಯುತ್ತಲೇ ಸೌಂದರ್ಯ ತಾನೇ ಚಿತ್ರ ನಿರ್ಮಿಸಿದರು. ಕಾಸರವಳ್ಳಿ ನಿರ್ದೇಶನದ ‘ದ್ವೀಪ’ ಸೌಂದರ್ಯಾಗೆ ಹೆಸರು ಹಾಗೂ ಪ್ರಶಸ್ತಿ ಎರಡನ್ನೂ ತಂದುಕೊಟ್ಟ ಚಿತ್ರ. ಸೌಂದರ್ಯ ಹಾದಿಯನ್ನು ಇನ್ನೊಬ್ಬ ಕನ್ನಡತಿ ಜಯಮಾಲಾ ಈ ಮೊದಲೇ ಕ್ರಮಿಸಿದ್ದರು. ಋತು ಚಕ್ರದಲ್ಲಿ ಹಣ್ಣಾಗದ ಹೂವು ತಾರಾ ಕೂಡ, ತಂಗಿ-ಗೆಳತಿ-ಅರೆನಾಯಕಿ ಪಾತ್ರಗಳ ಕಾವು ಆರಿದ ನಂತರ ಕಲಾತ್ಮಕ ಚಿತ್ರಗಳತ್ತ ವಾಲಿ ಖ್ಯಾತಿ ಗಳಿಸಿದ ಉದಾಹರಣೆ ಕಣ್ಣ ಮುಂದೆಯೇ ಇದೆ.
ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸುವುದರಿಂದ ನಾಯಕಿಯರಿಗೆ ಒಂದು ಅನುಕೂಲವೂ ಇದೆ. ನೆಲ ಕಾಣದ ಕಾಲದಲ್ಲಿ ಅಂಟಿಸಿಕೊಂಡ ಇಮೇಜನ್ನು ತೊಳೆದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಕಲಾತ್ಮಕ ಚಿತ್ರಗಳು ಅವರ ನೆರವಿಗೆ ಬರುತ್ತವೆ. ಕಾನೂರು ಹೆಗ್ಗಡತಿಯನ್ನಾಗಿ ತಾರಾಳನ್ನು ನೋಡಿದ ಪ್ರೇಕ್ಷಕ- ಈ ಮುಂಚೆ ಸಾಲುಸಾಲು ಚಿತ್ರಗಳಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡ ತಾರಾಳನ್ನು ಮರೆಯುತ್ತಾನೆ. ಒಬ್ಬ ನಟಿಗೆ ಇನ್ನೇನು ಬೇಕು ?
ಇದೇ ಹಿನ್ನೆಲೆಯಲ್ಲಿ ಇನ್ನೊಬ್ಬ ಕನ್ನಡತಿ ಭಾವನಾಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ‘ಚಂದ್ರಮುಖಿ ಪ್ರಾಣಸಖಿ’ ಎನ್ನುವ ಲವಲವಿಕೆಯ ಚಿತ್ರದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಭಾವನಾಗೆ ಆನಂತರ ಸಿಕ್ಕಿದ್ದೆಲ್ಲ ಅಧ್ವಾನದ ಪಾತ್ರಗಳೇ. ಕೊನೆಕೊನೆಗಂತೂ ಭಾವನಾ ಐಟಂ ಸಾಂಗ್ಗಳಲ್ಲಿ ಗುರ್ತಿಸಿಕೊಂಡು ಬಿಟ್ಟರು. ತಮಿಳು ಸಿನಿನಗರಿಯಿಂದ ಭಾವನಾಳ ರೋಚಕ ಚಿತ್ರಗಳು ಹೊರಬೀಳತೊಡಗಿದವು. ಈ ನಡುವೆ ಭಾವನಾ ಬೆಂಗಳೂರಿನಿಂದ ಕಣ್ಮರೆಯಾಗಿಯೂಬಿಟ್ಟರು. ಭಾವನಾ ಎನ್ನುವ ನಟಿಯ ಹೆಸರು ಗಾಂಧಿನಗರದಿಂದ ಅಳಿಸಿಹೋಯಿತು ಅಂದುಕೊಳ್ಳುತ್ತಿರುವಾಗ್ಗೆ , ಭಾವನಾ ಕೈ ಹಿಡಿದದ್ದು ಒಂದು ಕಲಾತ್ಮಕ ಚಿತ್ರ. ಬರಗೂರು ನಿರ್ದೇಶನದ ಚಿತ್ರದ ಹೆಸರು ‘ಕ್ಷಾಮ’. ಈ ಚಿತ್ರದಲ್ಲಿನ ಅಭಿನಯಕ್ಕೆ ಭಾವನಾರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯೂ ದೊರೆಯಿತು. ಭಾವನಾ ಈಗ ಇನ್ನೊಂದು ಕಲಾತ್ಮಕ ಚಿತ್ರ ‘ಶಾಂತಿ’ಯಲ್ಲಿ ನಟಿಸುತ್ತಿದ್ದಾರೆ. ಈ ಸಂಕ್ರಮಣ ಸಂದರ್ಭದಲ್ಲಿ ಇನ್ನುಮುಂದೆ ಐಟಂ ಸಾಂಗ್ಗಳಿಗೆ ನಮಸ್ಕಾರ ಎಂದಿದ್ದಾರೆ. ಆಕೆಗೆ ಒಳ್ಳೆಯದಾಗಲಿ.
ಕರೀನಾ, ಸೌಂದರ್ಯ, ಜಯಮಾಲಾ, ತಾರಾ, ಭಾವನಾ ನೆನಪಾಗಲಿಕ್ಕೆ ಕಾರಣ- ಇನ್ನೊಬ್ಬ ಕನ್ನಡದ ಹುಡುಗಿ ರುಚಿತಾ ಪ್ರಸಾದ್. ಆರಕ್ಕೇರದ ಮೂರಕ್ಕಿಳಿಯದ ರುಚಿತಾ ಪ್ರಸಾದ್ ಒಂದರ್ಥದಲ್ಲಿ ನತದೃಷ್ಟೆ . ಮೊದಲ ಚಿತ್ರ ‘ರಂಗೋಲಿ’ ಹೆಸರು ತಂದುಕೊಟ್ಟರೂ ಅವಕಾಶ ತಂದುಕೊಡಲಿಲ್ಲ . ಈ ರುಚಿತಾ ಆನಂತರ ರುಚಿಸಿದ್ದು ಸೆಕ್ಸಿ ಪಾತ್ರಗಳಿಗೆ ಮಾತ್ರ. ಮಿಡ್ನೈಟ್ ಮಸಾಲಾದಲ್ಲಿ ರುಚಿತಾ ನಟನೆಯ ಹಾಡುಗಳು ಖಾಯಂ ಸ್ಥಾನ ಗಿಟ್ಟಿಸಿಕೊಂಡವು. ಈ ಪರಿಯ ರುಚಿತಾ ಈಗ ಕಲಾತ್ಮಕ ಚಿತ್ರಗಳ ಮಾತನಾಡುತ್ತಿದ್ದಾರೆ.
ಇತ್ತೀಚೆಗೆ, ಕರಾವಳಿ ಉತ್ಸವದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದ ರುಚಿತಾ- ಸುದ್ದಿಗಾರರೊಂದಿಗೆ ಮಾತನಾಡುವಾಗ ಕಲಾತ್ಮಕ ಚಿತ್ರಗಳ ತಮ್ಮ ಒಲವನ್ನು ಪ್ರಕಟಪಡಿಸಿದರು.
ಕಲಾತ್ಮಕ ಚಿತ್ರಗಳಲ್ಲಿ ನಟಿಸಲು ನನಗೆ ತುಂಬಾ ಇಷ್ಟ . ಒಳ್ಳೆಯ ಪಾತ್ರ ಸಿಕ್ಕರೆ ಉಚಿತ ಕಾಲ್ಷೀಟ್ ಕೊಡಲೂ ಸಿದ್ಧ . ಜನ ನನ್ನ ಪಾತ್ರವನ್ನು ಗುರ್ತಿಸುವಂತಾಗಬೇಕು. ಹಣ ನನಗೆ ಮುಖ್ಯವಲ್ಲ . ನಾನು ಶ್ರೀಮಂತ ಕುಟುಂಬದಿಂದ ಬಂದವಳು ಎಂದು ರುಚಿತಾ ಹೇಳಿಕೊಂಡರು.
ನಿರ್ದೇಶನದ ಆಸೆಯೂ ರುಚಿತಾಗೆ ಇದೆಯಂತೆ. ಒಂದಲ್ಲಾ ಒಂದು ದಿನ ಆಸ್ಕರ್ ಗೆಲ್ಲುವಂಥ ಚಿತ್ರವೊಂದನ್ನು ನಿರ್ದೇಶಿಸುವ ಕನಸು ರುಚಿತಾ ಮನಸ್ಸಲ್ಲಿ ಮೊಳೆತಿದೆ. ಸದ್ಯಕ್ಕೆ ಎಂ.ಎಸ್.ಸತ್ಯು ನಿರ್ದೇಶನದ ‘ಚಾಂದಿನಿ ಬಾರ್’ ಚಿತ್ರವನ್ನು ರುಚಿತಾ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಚಾಂದಿನಿ ಬಾರ್ನಲ್ಲಿ ಆಕೆಯದು ಸವಾಲಿನ ಪಾತ್ರವಂತೆ. 15 ವರ್ಷದ ಮುಸ್ಲಿಂ ಹುಡುಗಿಯ ಪಾತ್ರವನ್ನು ಪೋಷಿಸಿದ್ದಾರಂತೆ. ಚಾಂದಿನಿ ಬಾರ್ನಲ್ಲಿ ನಟಿಸಲು ಸಂಭಾವನೆ ತೆಗೆದುಕೊಂಡರೋ ಇಲ್ಲವೋ ಎನ್ನುವ ಗುಟ್ಟನ್ನು ಮಾತ್ರ ರುಚಿತಾ ಬಿಟ್ಟುಕೊಡಲಿಲ್ಲ . ರುಚಿತಾಗೂ ಒಳ್ಳೆಯದಾಗಲಿ.
ಪೂರಕ ಓದಿಗೆ-
ಬಣ್ಣಮೋಹಿ ಹುಸೇನ್ ಚಿತ್ರಕ್ಕೆ ಇಂದಿರಾನಗರದ ಇಂದಿರೆ !
ರುಚಿತಾಗೆ ಸೈಕಿಕ್ ರೋಲ್ ಇಷ್ಟವಂತೆ!
ಮುಖಪುಟ / ಸ್ಯಾಂಡಲ್ವುಡ್