Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದರ್ ತೆರೆಸಾ ಪ್ರತಿಮೆ ಪಕ್ಕದಲ್ಲಿ ನಿಂತಾಗ !
I am Aishwarya Rai and I am also from Karnataka. Ma, please bless me- ಕೋಲ್ಕತಾದ ಮದರ್ ತೆರೆಸಾ ಮಿಷನರಿಯಲ್ಲಿ ಐಶ್ವರ್ಯ ರೈ ಹೀಗೆ ಕೇಳುತ್ತಾ ಅಕ್ಷರಶಃ ಮಗುವಂತಾಗಿದ್ದಳು. ಅವಳ ಮುಂದೆ ತೊಂಬತ್ತು ವಯಸ್ಸಿನ ಸಿಸ್ಟರ್ ನಿಂತಿದ್ದರು. ಐಶ್ವರ್ಯ ಕಣ್ಣಂಚಲಿ ತೇವ ಆಡುತ್ತಿತ್ತು.
ಅಪ್ಪಟ ಭಕ್ತೆಯ ಚಹರೆ ಹೊತ್ತಿದ್ದ ಐಶ್ವರ್ಯ ನವೆಂಬರ್ 17ನೇ ತಾರೀಕು ಅಲ್ಲಿದ್ದದ್ದು ಒಂದೇ ತಾಸು. ಆದರೆ, ಆಕೆಯೇ ಹೇಳುವಂತೆ ಪಡೆದುಕೊಂಡ ಅನುಭವ ಅನನ್ಯ.
ಸಹರಾ ಇಂಡಿಯಾದ ಟ್ರೇಡ್ ಮಾರ್ಕಿನ ಸೀರೆ ಉಟ್ಟು ಭಾರತ ನಾರಿಯಂತೆ ಕಂಗೊಳಿಸುತ್ತಿದ್ದ ರೈ ಒಳಗಿನ ತತ್ವಜ್ಞಾನಿ ಮಾತಾಡಿದ್ದು ಹೀಗೆ- ನನ್ನ ಗುರಿ ಯಾವುದು ಅಂತ ನನಗೆ ಗೊತ್ತಾಗಬೇಕಿದೆ. ಭಗವಂತ ನನ್ನನ್ನು ಎಲ್ಲಿಗೆ ಮುಟ್ಟಿಸಬೇಕೆಂದಿದ್ದಾನೋ, ಅಲ್ಲಿಗೆ ತಲುಪಲು ನನಗೆ ಇಲ್ಲಿನ ಹಿರಿಯರ ಆಶೀರ್ವಾದ ಬೇಕಿದೆ. ಮದರ್ ತೆರೆಸಾ ಯಾವತ್ತಿಗೂ ನನ್ನ ಹೃದಯದಲ್ಲಿ ನಿಂತಿರುತ್ತಾರೆ. ಅವರು ಅಡ್ಡಾಡಿದ ಈ ಜಾಗದಲ್ಲಿ ಇವತ್ತಿಗೂ ಸಿಗುವ ಅನುಭವ ಮನಸ್ಸನ್ನು ತಣ್ಣಗೆ ಮಾಡುತ್ತದೆ. ನಾನಿಲ್ಲಿಗೆ ಬಂದು ಕೃತಾರ್ಥಳಾದೆ.
ಸಹಾರದವರು ಕೊಟ್ಟ 11 ಲಕ್ಷ ರುಪಾಯಿ ದೇಣಿಗೆ ಹಣವನ್ನು ಮಿಷನರಿಗೆ ಒಪ್ಪಿಸಿದ ಐಶ್ವರ್ಯಾ, ಅಲ್ಲಿದ್ದ ಮಕ್ಕಳಿಗೆ ಉಡುಗೊರೆಗಳನ್ನು ಹಂಚಿದರು. ಕಾಲಿಲ್ಲದ ಮಕ್ಕಳಿಗೆ ಗಾಲಿ ಕುರ್ಚಿಗಳನ್ನು ಹಂಚಿದರು. ಅಭಿಮಾನಿ ಬಳಗ ಸುತ್ತುಗಟ್ಟಿ, ಮೆಚ್ಚಿನ ನಟಿಯಿಂದ ಸಹಿ ಪಡೆದುಕೊಂಡರು. ಯಾರೋ ಒಬ್ಬಾಕೆಯಂತೂ 'ಪಾರೋ ಅಂತ ಬರೆಯಿರಿ. ದೇವದಾಸ್ನಲ್ಲಿ ನೀವು ಪಾರೋ ಆಗಿ ನನ್ನ ಮನಸ್ಸನ್ನು ಗೆದ್ದಿದ್ದೀರಿ" ಅಂದಳು. ಹಿನ್ನೆಲೆಯಾಗಿ ದೇವದಾಸ್ ಚಿತ್ರದ 'ಡೋಲಾ ರೇ" ಹಾಡು ಉಲಿಯುತ್ತಿತ್ತು.