Don't Miss!
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಂಗನಾಯಕಿ' ಎದುರು ನಿಂತ 'ದಂಡುಪಾಳ್ಯ' ಗ್ಯಾಂಗ್
ನಾಳೆ (ನವೆಂಬರ್ 1) ಕನ್ನಡ ರಾಜ್ಯೋತ್ಸವ ಈ ವಿಶೇಷವಾಗಿ ಕನ್ನಡದ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ರಂಗನಾಯಕಿ' ಎದುರು 'ದಂಡುಪಾಳ್ಯ' ಗ್ಯಾಂಗ್ ನಿಂತುಕೊಂಡಿದೆ.
ಅದಿತಿ ಪ್ರಭುದೇವ ನಟನೆಯ 'ರಂಗನಾಯಕಿ' ಹಾಗೂ ಸುಮನಾ ರಂಗನಾಥ್ ಅಭಿನಯದ 'ದಂಡುಪಾಳ್ಯಂ 4 ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಈ ಎರಡು ಸಿನಿಮಾಗಳು ನಾಯಕಿ ಪ್ರಧಾನವಾಗಿವೆ.
ದಂಡುಪಾಳ್ಯಂ 4 ಟ್ರೈಲರ್: ಮುಂದುವರಿದ ರಕ್ಕಸರ ಅಟ್ಟಹಾಸ
'ರಂಗನಾಯಕಿ' ಸಿನಿಮಾದ ಪ್ರೀಮಿಯರ್ ಶೋ ಈಗಾಗಲೇ ನಡೆದಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದಿತಿ ಪ್ರಭುದೇವ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ದಯಾಳ್ ಪದ್ಮನಾಭನ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ಇಂಡಿಯನ್ ಪನೋರಮಾಗೆ ಈ ಸಿನಿಮಾ ಆಯ್ಕೆ ಆಗಿತ್ತು.
ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವನ್ನು ಇಟ್ಟುಕೊಂಡು ಕಥೆ ಮಾಡಿದ ದಯಾಳ್, ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಉಳಿದಂತೆ, ಶ್ರೀನಿ ತ್ರಿವಿಕ್ರಮ್ ಹಾಗೂ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ.
'ರಂಗನಾಯಕಿ'ಯಾದ ನಟಿ ಅದಿತಿ ಪ್ರಭುದೇವ
ದಂಡುಪಾಳ್ಯಂ 4 ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಸರಣಿಯ ಈ ಹಿಂದಿನ ಚಿತ್ರಗಳಂತೆ ನಾಲ್ಕನೇ ಚಿತ್ರದಲ್ಲೂ ಅದೇ ಭಯಾನಕ, ಕ್ರೂರ, ಹಿಂಸೆ ಎಲ್ಲವೂ ಇದ್ದು, ಸಿನಿಮಾ ಪ್ರೇಕ್ಷಕರಿಗೆ ಭಯ ಹುಟ್ಟಿಸುತ್ತಿದೆ. ವೆಂಕಟ್ ಈ ಚಿತ್ರವನ್ನ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಕೂಡ.
ಜನವರಿ ತಿಂಗಳಲ್ಲಿ ಹಿಂದಿ, ಬೋಜ್ ಪುರಿ, ಮರಾಠಿ, ಛತ್ತೀಸ್ ಗಡ್, ಗುಜರಾತಿ, ಬೆಂಗಾಳಿ ಭಾಷೆಯಗಳಲ್ಲಿ ಏಕಕಾಲದಲ್ಲಿ 1000 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯೋಜನೆ ಸಿದ್ಧಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.